masthmagaa.com:
ಕಳೆದ ತಿಂಗಳು ಉತ್ತರಾಖಂಡ್ನ ಗಡಿಯಲ್ಲಿ ಕುದುರೆ ಮೂಲಕ ಎಲ್ಎಸಿ ದಾಟಿ ಬಂದು ವಾಪಸ್ ಹೋಗಿದ್ದ ಚೀನೀ ಸೈನಿಕರು ಕಳೆದ ಅರುಣಾಚಲ ಪ್ರದೇಶದಲ್ಲಿ ಮೂಗು ತೂರಿಸಿದ್ದಾರೆ. ಈ ವೇಳೆ ಚೀನೀ ಯೋಧರನ್ನು ಭಾರತೀಯ ಯೋಧರು ತಡೆದಿದ್ದಾರೆ. ಇದ್ರಿಂದ ಉಭಯದೇಶಗಳ ಸೈನಿಕರು ಮುಖಾಮುಖಿಯಾಗಿದ್ದು ಸಂಘರ್ಷದ ವಾತಾವರಣ ನಿರ್ಮಾಣವಾಗಿ ಹಲವು ಗಂಟೆಗಳ ಕಾಲ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿತ್ತು. ಟಿಬೆಟ್ ಮೂಲಕ ಅರುಣಾಚಲ ಪ್ರದೇಶದ ತವಾಂಗ್ಗೆ ಹಲವು ಚೀನೀ ಯೋಧರು ಬಂದಿದ್ದಾರೆ. ವಾಸ್ತವ ಗಡಿ ನಿಯಂತ್ರಣ ರೇಖೆ ಬಳಿ ಇರೋ ಬಮ್ಲಾ ಪಾಸ್ ಮತ್ತು ಯಾಂಗ್ಸ್ಟೇಯಲ್ಲಿದ್ದ ಭಾರತದ ಕೆಲ ಬಂಕರ್ಗಳನ್ನು ನಾಶ ಮಾಡೋಕೆ ಯತ್ನಿಸಿದ್ರು. ಇದೇ ವೇಳೆ ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸರು ಚೀನೀ ಯೋಧರನ್ನು ವಶಕ್ಕೆ ಪಡೆದಿದ್ದಾರೆ. ನಂತರ ಉನ್ನತ ಮಟ್ಟದ ಮಿಲಿಟರಿ ಕಮಾಂಡರ್ಗಳು ಮಾತುಕತೆ ಮೂಲಕ ವಿವಾದ ಬಗೆಹರಿಸಿದ್ದು, ವಶದಲ್ಲಿದ್ದ ಚೀನೀ ಯೋಧರನ್ನು ಭಾರತೀಯ ಯೋಧರು ಬಿಟ್ಟು ಕಳುಹಿಸಿದ್ದಾರೆ. ಆದ್ರೆ ನಂತರ ಎರಡು ಕಡೆಯ ಯೋಧರು ಹಿಂದೆ ಸರಿದಿದ್ದರಿಂದ ಯಾವುದೇ ಸಾವು ನೋವಿನ ಘಟನೆಗಳು ವರದಿಯಾಗಿಲ್ಲ ಅಂತ ಗೊತ್ತಾಗಿದೆ. ಅಂದಹಾಗೆ ಈ ಭಾಗದಲ್ಲಿ ಆಗಾಗ್ಗೆ ಚೀನಾ ಗಡಿ ನುಗ್ಗೋ ಕೆಲಸ ಮಾಡ್ತಾನೇ ಇರುತ್ತೆ.
-masthmagaa.com
Contact Us for Advertisement