masthmagaa.com:
ಇಸ್ರೇಲ್ನಲ್ಲಿ ನೆರವು ಸಾಮಗ್ರಿ ಪಡೆಯಲು ಬಂದ ಜನರ ಮೇಲೆ ದಾಳಿ ನಡೆದ ವಿಚಾರವಾಗಿ ಭಾರತ ಕಳವಳ ವ್ಯಕ್ತಪಡಿಸಿದೆ. ಫೆಬ್ರವರಿ 29ರಂದು ನಡೆದಿದ್ದ ಈ ಘಟನೆಯಲ್ಲಿ 100ಕ್ಕೂ ಹೆಚ್ಚು ಪ್ಯಾಲಸ್ತೀನಿಯರು ಬಲಿಯಾಗಿದ್ರು. ಈ ಬಗ್ಗೆ ಹೇಳಿಕೆ ರಿಲೀಸ್ ಮಾಡಿರೋ ಭಾರತ ಸರ್ಕಾರ, ʻನೆರವು ಸಾಮಗ್ರಿ ವಿತರಣೆ ವೇಳೆ ಪ್ರಾಣಹಾನಿಯಾದ ವಿಚಾರ ಕೇಳಿ ಶಾಕ್ ಆಗಿದೆ. ನಾಗರೀಕರ ಬಲಿ ಹಾಗೂ ಗಾಜಾದ ಮಾನವೀಯ ಪರಿಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ. ಅಲ್ಲಿನ ಜನಕ್ಕೆ ಮಾನವೀಯ ನೆರವಿನ ಅಗತ್ಯ ಇರೋದನ್ನ ನಾವು ಪುನರುಚ್ಚರಿಸುತ್ತೇವೆʼ ಅಂತೇಳಿದೆ.
-masthmagaa.com
Contact Us for Advertisement