masthmagaa.com:
ಭಾರತದ ಅರುಣಾಚಲ ಪ್ರದೇಶಕ್ಕೆ ಸೇರಿದ 30ಕ್ಕೂ ಹೆಚ್ಚು ಪ್ರದೇಶಗಳಿಗೆ ಚೀನಾ ಮರುನಾಮಕರಣ ಮಾಡಿ ಭಾರತವನ್ನ ಕೆಣಕೋ ಕೆಲಸ ಮಾಡಿತ್ತು. ಚೀನಾದ ಈ ಉದ್ದಟತನಕ್ಕೆ ಭಾರತ ರಿಯಾಕ್ಟ್ ಮಾಡಿದೆ. ʻನಾವು ಇಂತಹ ಪ್ರಯತ್ನಗಳನ್ನ ಕಟುವಾಗಿ ವಿರೋಧಿಸ್ತೇವೆ. ಇದೊಂದು ಅರ್ಥಹೀನ ಪ್ರಯತ್ನ..ಈ ರೀತಿ ಮರುನಾಮಕರಣ ಮಾಡೋದ್ರಿಂದ ಅರುಣಾಚಲ ಪ್ರದೇಶದಲ್ಲಿ ಏನೂ ಬದಲಾಗಲ್ಲ. ಈ ಹಿಂದೆ, ಇಂದು ಮತ್ತು ಮುಂದೇನೂ ಅದು ಭಾರತದ ಅವಿಭಜಿತ ಅಂಗ ಅಂತ ಭಾರತದ ವಿದೇಶಾಂಗ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ. ಇತ್ತ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಕೂಡ ಚೀನಾಗೆ ಟಾಂಗ್ ಕೊಟ್ಟಿದ್ದಾರೆ. ಶೃಂಗಸಭೆಯೊಂದ್ರಲ್ಲಿ ಮಾತನಾಡ್ತಿದ್ದ ಜೈಶಂಕರ್, ʻಇವತ್ತು ನಾನು ನಿಮ್ಮ ಮನೆಯ ಹೆಸರು ಬದಲಾಯಿಸಿದ್ರೆ, ಆ ಮನೆ ನನ್ನದಾಗುತ್ತಾ?ʼ ಅಂತ ಪ್ರಶ್ನಿಸಿದ್ದಾರೆ. ಜೊತೆಗೆ ʻಅರುಣಾಚಲ ಪ್ರದೇಶ ಈ ಹಿಂದೆ, ಇಂದು, ಎಂದೆಂದಿಗೂ ಭಾರತದ ರಾಜ್ಯವಾಗಿ ಉಳಿಯಲಿದೆ. ಹೆಸರು ಬದಲಾಯಿಸೋದ್ರಿಂದ ಯಾವುದೇ ಪರಿಣಾಮ ಬೀರಲ್ಲʼ ಅಂತೇಳಿದ್ದಾರೆ.
-masthmagaa.com
Contact Us for Advertisement