ನಂಗೆ ಈ ಕೋರ್ಟ್​ ಮೇಲೆ ನಂಬಿಕೆ ಇಲ್ಲ ಅಂದಿದ್ಯಾಕೆ ಕಂಗನಾ..?

masthmagaa.com:

ಕವಿ, ಚಿತ್ರಸಾಹಿತಿ ಜಾವೇದ್​ ಅಖ್ತರ್​ ಹಾಕಿರೋ ಮಾನನಷ್ಟ ಮೊಕದ್ದಮೆ ಪ್ರಕರಣದ ವಿಚಾರಣೆಗೆ ಇವತ್ತು ಕಂಗನಾ ಅಂಧೇರಿಯ ಮೆಟ್ರೋ ಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್​​ಗೆ ಹಾಜರಾದ್ರು. ಕೋರ್ಟ್​ ಹಾಜರಾಗುವುದಕ್ಕೂ ಮುನ್ನ ಜಾವೇದ್​ ಅಖ್ತರ್ ನನಗೆ ಬೆದರಿಕೆ ಹಾಕ್ತಿದ್ದಾರೆ ಅಂತ ಕಂಗನಾ ದೂರು ಸಲ್ಲಿಸಿದ್ದಾರೆ. ಜೊತೆಗೆ ಕೋರ್ಟ್​ನಲ್ಲಿ ಮಾತಾಡಿದ ಕಂಗನಾ ವಕೀಲರು, ಈಗ ವಿಚಾರಣೆ ನಡೆಸುತ್ತಿರುವ ಅಂಧೇರಿ ಮೆಟ್ರೋಪಾಲಿಟನ್ ಕೋರ್ಟ್​ ತನಗೆ ಪಕ್ಷಪಾತ ಮಾಡ್ತಿದೆ ಅಂತ ಕಂಗನಾಗೆ ಅನ್ನಿಸ್ತಿದೆ. ಈಗಾಗಿ ಪ್ರಕರಣವನ್ನು ಬೇರೊಂದು ನ್ಯಾಯಾಲಯಕ್ಕೆ ವರ್ಗಾಯಿಸಬೇಕು ಅಂತ ಮನವಿ ಮಾಡಿದ್ದಾರೆ. ಅಂದಹಾಗೆ ಸುಶಾಂತ್ ಸಿಂಗ್ ನಿಧನದ ಬಗ್ಗೆ ಮಾತಾಡ್ತಾ ಸಂದರ್ಶನವೊಂದ್ರಲ್ಲಿ ನನ್ನ ಬಗ್ಗೆ ಸುಳ್ಳು ಆರೋಪ ಮಾಡಿದ್ದಾರೆ ಅಂತ ಜಾವೇದ್ ಅಖ್ತರ್ ಮಾನನಷ್ಟ ಕೇಸ್ ದಾಖಲಿಸಿದ್ರು.

-masthmagaa.com

Contact Us for Advertisement

Leave a Reply