ಸಚಿವರ ಶಿಫಾರಸ್ಸಿಗೆ ಬೆಲೆ ಇಲ್ವಾ? ಅಧಿಕಾರಿಗಳೇ ವರ್ಗಾವಣೆ ಮಾಡ್ತಿದ್ದಾರಂತೆ!

masthmagaa.com:

ರಾಜ್ಯದಲ್ಲಿ ವರ್ಗಾವಣೆ ವಿಚಾರ ಮತ್ತೊಮ್ಮೆ ಸುದ್ದಿ ಮಾಡ್ತಿದೆ. ಸಚಿವರ ಶಿಫಾರಸುಗಳನ್ನ ಲೆಕ್ಕಿಸದೇ ಅಧಿಕಾರಿಗಳು ತಾವೇ ವರ್ಗಾವಣೆ ಮಾಡ್ತಿದ್ದಾರೆ ಅಂತ ಆರೋಪ ಕೇಳಿ ಬಂದಿದೆ. ಕಾರ್ಮಿಕ ಇಲಾಖೆಯ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಸಚಿವ ಸಂತೋಷ ಲಾಡ್​​​ ಅವರ ಶಿಫಾರಸನ್ನೇ ಪರಿಗಣಿಸಿಲ್ಲ. ಸಚಿವರಿಗೂ ಮಾಹಿತಿ ನೀಡದೇ ಅಧಿಕಾರಿಗಳು ತಮ್ಮದೇ ವರ್ಗಾವಣೆ ಪಟ್ಟಿ ಸಿದ್ದಪಡಿಸಿಕೊಂಡಿದ್ದಾರೆ ಅಂತ ಹೇಳಲಾಗ್ತಿದೆ. ಮುಖ್ಯಮಂತ್ರಿಗಳ ಸಚಿವಾಲಯದ ಅಧಿಕಾರಿಗಳು ಈ ರೀತಿ ಮಾಡಿದ್ದಾರೆ ಅಂತ ಸುದ್ದಿ ಓಡಾಡ್ತಿದೆ.

masthmagaa.com

Contact Us for Advertisement

Leave a Reply