masthmagaa.com:
ರಾಜ್ಯದಲ್ಲಿ ವರ್ಗಾವಣೆ ವಿಚಾರ ಮತ್ತೊಮ್ಮೆ ಸುದ್ದಿ ಮಾಡ್ತಿದೆ. ಸಚಿವರ ಶಿಫಾರಸುಗಳನ್ನ ಲೆಕ್ಕಿಸದೇ ಅಧಿಕಾರಿಗಳು ತಾವೇ ವರ್ಗಾವಣೆ ಮಾಡ್ತಿದ್ದಾರೆ ಅಂತ ಆರೋಪ ಕೇಳಿ ಬಂದಿದೆ. ಕಾರ್ಮಿಕ ಇಲಾಖೆಯ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಸಚಿವ ಸಂತೋಷ ಲಾಡ್ ಅವರ ಶಿಫಾರಸನ್ನೇ ಪರಿಗಣಿಸಿಲ್ಲ. ಸಚಿವರಿಗೂ ಮಾಹಿತಿ ನೀಡದೇ ಅಧಿಕಾರಿಗಳು ತಮ್ಮದೇ ವರ್ಗಾವಣೆ ಪಟ್ಟಿ ಸಿದ್ದಪಡಿಸಿಕೊಂಡಿದ್ದಾರೆ ಅಂತ ಹೇಳಲಾಗ್ತಿದೆ. ಮುಖ್ಯಮಂತ್ರಿಗಳ ಸಚಿವಾಲಯದ ಅಧಿಕಾರಿಗಳು ಈ ರೀತಿ ಮಾಡಿದ್ದಾರೆ ಅಂತ ಸುದ್ದಿ ಓಡಾಡ್ತಿದೆ.
Contact Us for Advertisement