ಕರ್ನಾಟಕದ ಜನತೆಯನ್ನ ಕಾಂಗ್ರೆಸ್‌ ಕತ್ತಲೆಗೆ ನೂಕಿದೆ : ಡಿಕೆಶಿಗೆ ತೆಲಂಗಾಣ ಮಂತ್ರಿ ಟಾಂಗ್!

masthmagaa.com:

ತೆಲಂಗಾಣ ಸಿಎಂ ಚಂದ್ರಶೇಖರ್‌ ರಾವ್‌ ಪುತ್ರ, ಅಲ್ಲಿನ ಮಾಹಿತಿ ತಂತ್ರಜ್ಞಾನ ಸಚಿವರೂ ಆಗಿರೋ ಕೆ. ಟಿ. ರಾಮರಾವ್‌ ಹಾಗೂ ಕರ್ನಾಟಕದ ಡಿಸಿಎಂ ಡಿ. ಕೆ. ಶಿವಕುಮಾರ್‌ ನಡುವೆ ಮತ್ತೊಂದು ಸುತ್ತಿನ ಸಂಘರ್ಷ ಆಗಿದೆ. ನಿನ್ನೆ ತೆಲಂಗಾಣದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಡಿ. ಕೆ. ಶಿವಕುಮಾರ್‌ ಅವರು ಒಂದು ಹೇಳಿಕೆ ಕೊಟ್ಟಿದ್ರು, “ಕರ್ನಾಟಕಕ್ಕೆ ಬಂದು ಅಲ್ಲಿನ ಅಭಿವೃದ್ದಿ, ಕಲ್ಯಾಣ ಕೆಲಸಗಳನ್ನ ಒಂದ್ಸಲ ನೋಡಿ. ತೆಲಂಗಾಣದಲ್ಲಿ ಈ ಬಾರಿ ಕಾಂಗ್ರೆಸ್‌ ಸರ್ಕಾರ ಬರೋದು ಖಚಿತ” ಅಂದಿದ್ರು. ಇದರ ಬೆನ್ನಲ್ಲೆ ತೆಲಂಗಾಣ ಸಚಿವ KTR ಡಿಕೆಶಿಗೆ ಟಾಂಗ್‌ ಕೊಟ್ಟಿದ್ದಾರೆ. ʻಕರ್ನಾಟಕದ ಜನತೆಯನ್ನ ಕಾಂಗ್ರೆಸ್‌ ಕತ್ತಲೆಗೆ ನೂಕಿದೆ. ಕಾಂಗ್ರೆಸ್‌ ಎಷ್ಟು ಅಸಮರ್ಥವಾಗಿದೆ ಅಂತ ನಮ್ಮೆಲ್ರಿಗೂ ಗೊತ್ತು. ಅಧಿಕಾರಕ್ಕೆ ಬಂದಾಗ್ಲಿಂದ 5 ಗ್ಯಾರಂಟಿಗಳ ಹೆಸರಲ್ಲಿಆ ರಾಜ್ಯವನ್ನ ಲೂಟಿ ಅವರು ಮಾಡ್ತಿದ್ದಾರೆ. ಸರ್ಕಾರ ಬಂದ ಒಂದೇ ವರ್ಷಕ್ಕೆ ರಾಜ್ಯವನ್ನ ದಿವಾಳಿ ಹಂತಕ್ಕೆ ತಲುಪಿಸಿದ್ದೀರಿ. ಕಾಂಗ್ರೆಸ್‌ ಸರ್ಕಾರ ಬಂದ್ರೆ ತೆಲಂಗಾಣಕ್ಕು ಇದೇ ಗತಿ ತರ್ತೀರಿ. ಅಂತ ಡಿಕೆ ಶಿವಕುಮಾರ್‌ ವಿರುದ್ದ ಕೆ ಟಿ ಆರ್‌ ತೀವ್ರ ವಾಗ್ದಾಳಿ ಮಾಡಿದಾರೆ. ಅಂದ್ಹಾಗೆ ಈ ಹಿಂದೆ ಸಹ ಡಿಕೆಶಿ ಹಾಗೂ ಕೆಟಿ ಆರ್‌ ನಡುವೆ ಬೆಂಗಳೂರಿನ ವಿಚಾರಕ್ಕೆ ಜಗಳ ಆಗಿತ್ತು. ಬೆಂಗಳೂರಲ್ಲಿ ಮೂಲಭೂತ ಸೌಕರ್ಯ ಸರಿ ಇಲ್ಲ ಹೈದ್ರಾಬಾದ್‌ಗೆ ಬನ್ನಿ ಅಂತ ಐಟಿ ಕಂಪನಿಗಳಿಗೆ ತೆಲಂಗಾಣ ಸಚಿವ ಕರೆ ಕೊಟ್ಟಿದ್ರು. ಅದಕ್ಕೆ ಉತ್ತರಿಸಿದ್ದ ಡಿಕೆಶಿ…ನಾವು ಅಧಿಕಾರಕ್ಕೆ ಬಂದು ಬೆಂಗಳೂರಿನ ವೈಭವವನ್ನ ಮರಳಿ ತರ್ತೇವೆ ಅಂತ ಕಳೆದ ವರ್ಷ ಉತ್ತರಿಸಿದ್ರು. ಅಂದಿನಿಂದ ಡಿಕೆ ಹಾಗೂ ಕೆಟಿ ಆರ್‌ ನಡುವೆ ರಾಜಕೀಯವಾಗಿ ತೀವ್ರ ಜಿದ್ದಾಜಿದ್ದು ನಡೀತಾ ಇದೆ.

masthmagaa.com

Contact Us for Advertisement

Leave a Reply