masthmagaa.com:
ಐಪಿಎಲ್ನಲ್ಲಿ ನಿನ್ನೆ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ರೋಚಕ ಪಂದ್ಯದಲ್ಲಿ ಡೆಲ್ಲಿ ತಂಡ ಜಯಭೇರಿ ಬಾರಿಸಿದೆ. ಒಂದು ಹಂತದಲ್ಲಿ ಪಂದ್ಯವು ಪಂಜಾಬ್ ಕೈಯಲ್ಲಿತ್ತು. ಆದ್ರೆ ಕೊನೆಯ 3 ಎಸೆತಗಳಲ್ಲಿ 1 ರನ್ ಕಲೆ ಹಾಕಲು ಪಂಜಾಬ್ ಬ್ಯಾಟ್ಸ್ಮನ್ಗಳು ವಿಫಲವಾದ ಹಿನ್ನೆಲೆ ಪಂದ್ಯ ಟೈ ಆಯ್ತು. ಬಳಿಕ ಸೂಪರ್ ಓವರ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲುವು ಸಾಧಿಸಿತು.
ಪಂಜಾಬ್ ತಂಡದ ಸೋಲಿನಲ್ಲಿ ಫೀಲ್ಡ್ ಅಂಪೈರ್ ನಿತಿನ್ ಮೆನನ್ ಮಾಡಿದ ಒಂದು ತಪ್ಪು ಕೂಡ ಸೇರಿಕೊಂಡಿದೆ. ಅಂದ್ಹಾಗೆ 19ನೇ ಓವರ್ನಲ್ಲಿ ಪಂಜಾಬ್ ತಂಡದ ಮಯಾಂಕ್ ಅಗರ್ವಾಲ್ ಮತ್ತು ಕ್ರಿಸ್ ಜೋರ್ಡನ್ 2 ರನ್ಗೆ ಓಡುತ್ತಿದ್ದಾಗ ಸ್ಕ್ವೇರ್ ಲೆಗ್ ಅಂಪೈರ್ ನಿತಿನ್ ಮೆನನ್ ಒಂದು ರನ್ ಶಾರ್ಟ್ ಅಂತ ತೀರ್ಪು ನೀಡಿದ್ರು. ಅಂದ್ರೆ ಕ್ರಿಸ್ ಜೋರ್ಡನ್ ಕ್ರೀಸ್ ಅನ್ನು ಸರಿಯಾಗಿ ಮುಟ್ಟಿಲ್ಲ ಅಂತ ಹೇಳಿದ್ರು. ಬಳಿಕ ಟಿವಿ ರಿಪ್ಲೈನಲ್ಲಿ ನೋಡಿದಾಗ ಕ್ರಿಸ್ ಜೋರ್ಡನ್ ಸರಿಯಾಗೇ ಕ್ರೀಸ್ ಮುಟ್ಟಿದ್ದಾರೆ ಅನ್ನೋದು ಗೊತ್ತಾಗಿತ್ತು. ಆದ್ರೆ ಪಂದ್ಯ ಮುಂದುವರಿದ್ರಿಂದ ಲೆಗ್ ಅಂಪೈರ್ ತಮ್ಮ ತೀರ್ಪನ್ನು ವಾಪಸ್ ತೆಗೆದುಕೊಳ್ಳಲಿಲ್ಲ.
ಕೊನೆಗೆ ಇದೇ ಒಂದು ರನ್ ಪಂದ್ಯದ ಗತಿಯನ್ನೇ ಬದಲಿಸಿತು. ಮೊದಲು ಪಂದ್ಯ ಟೈ ಆಗಿ ಬಳಿಕ ನಡೆದ ಸೂಪರ್ ಓವರ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸೋಲು ಅನುಭವಿಸಿತು. ಪಂದ್ಯ ಮುಗಿದ ಬಳಿಕವೂ ಪಂಜಾಬ್ ತಂಡದ ನಾಯಕ ಕೆ.ಎಲ್. ರಾಹುಲ್ ಅಂಪೈರ್ಗಳ ಜೊತೆ ಈ ಬಗ್ಗೆ ಚರ್ಚೆ ನಡೆಸಿದ್ದು ಕೂಡ ಕಂಡು ಬಂತು.
ಇದೀಗ ಫೀಲ್ಡ್ ಅಂಪೈರ್ ನಿತಿನ್ ಮೆನನ್ ಅವರ ತಪ್ಪು ತೀರ್ಪಿನ ಬಗ್ಗೆ ನಾಯಕ ಕೆ.ಎಲ್. ರಾಹುಲ್ ಮ್ಯಾಚ್ ರೆಫ್ರಿ ಜಾವಗಲ್ ಶ್ರೀನಾಥ್ ಅವರ ಗಮನಕ್ಕೆ ತಂದಿದ್ದಾರೆ. ಪಂಜಾಬ್ ತಂಡದ ಕೋ-ಓನರ್ ಮತ್ತು ಬಾಲಿವುಡ್ ನಟಿ ಪ್ರೀತಿ ಝಿಂಟಾ ಕೂಡ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅಂಪೈರ್ ಅವರ ತಪ್ಪು ಗೊತ್ತಾದ ಬಳಿಕವಾದ್ರೂ ಅದನ್ನು ಸರಿಪಡಿಸಿಕೊಳ್ಳುವ ನಿಯಮ ಬರಬೇಕು ಅಂತ ಪ್ರೀತಿ ಝಿಂಟಾ ಆಗ್ರಹಿಸಿದ್ದಾರೆ.
ಮತ್ತೊಂದುಕಡೆ ಸೆಹ್ವಾಗ್ ಕೂಡ ಅಂಪೈರ್ ನಿರ್ಧಾರದ ವಿರುದ್ಧ ಕಿಡಿಕಾರಿದ್ದು, ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಅಂಪೈರ್ಗೇ ಕೊಡಬೇಕಿತ್ತು ಅಂತ ಹೇಳಿದ್ದಾರೆ.
-masthmagaa.com
Contact Us for Advertisement