ಶಹೀನ್ ಭಾಗ್​​ನಲ್ಲಿ ಗುಂಡು ಹಾರಿಸಿದ್ದು ಎಎಪಿ ಸದಸ್ಯ..! ಪೊಲೀಸರಿಂದ ಸ್ಫೋಟಕ ಮಾಹಿತಿ

ದೆಹಲಿಯ ಶಹೀನ್​ಭಾಗ್​​ನಲ್ಲಿ ಗುಂಡಿನ ದಾಳಿ ನಡೆಸಿದ ವ್ಯಕ್ತಿ ಆಮ್ ಆದ್ಮಿ ಪಾರ್ಟಿಯ ಸದಸ್ಯ ಅಂತ ಪೊಲೀಸರು ಮಾಹಿತಿ ನೀಡಿದ್ದಾರೆ. ಶನಿವಾರ ಪ್ರತಿಭಟನಾ ಸ್ಥಳಕ್ಕೆ ಬಂದಿದ್ದ 25 ವರ್ಷದ ಕಪಿಲ್ ಗುಜ್ಜಾರ್​​​ ಗುಂಡಿನ ದಾಳಿ ನಡೆಸಿದ್ದ. ಜೊತೆಗೆ ಜೈ ಶ್ರೀರಾಮ್ ಎಂದು ಘೋಷಣೆಯನ್ನು ಮೊಳಗಿಸಿದ್ದ. ನಂತರ ಆತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಕಪಿಲ್ ತಾನು ಆಮ್ ಆದ್ಮಿ ಪಕ್ಷದ ಸದಸ್ಯ ಎಂದು ಒಪ್ಪಿಕೊಂಡಿದ್ದಾನೆ.

ಪ್ರತಿಭಟನೆ ಸ್ಥಳದಲ್ಲಿ ಮಹಿಳೆಯರು ಮತ್ತು ಮಕ್ಕಳು ಇದ್ದರೂ ಅವರ ಪಕ್ಕದಲ್ಲೇ ನಿಂತು, ಎರಡ್ಮೂರು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದ. ಅಲ್ಲದೆ ನಮ್ಮ ದೇಶದಲ್ಲಿ ಕೇವಲ ಹಿಂದೂಗಳದ್ದು ನಡೆಯುತ್ತೆ. ಬೇರೆ ಯಾರದ್ದೂ ನಡೆಯೋದಿಲ್ಲ ಅಂತ ಘೋಷಣೆ ಕೂಗಿದ್ದ.

ಕಪಿಲ್ ಮೊಬೈಲ್​ನಲ್ಲಿ ಕೆಲವೊಂದು ಫೋಟೋಗಳು ಸಿಕ್ಕಿದ್ದು ಇದ್ರಿಂದ ಆತ ಆಪ್ ಸದಸ್ಯ ಅನ್ನೋದು ಮತ್ತಷ್ಟು ದೃಢವಾಗಿದೆ. ಇದರಲ್ಲಿ ಎಎಪಿ ನಾಯಕರಾದ ಅತಿಷಿ ಸಿಂಗ್​, ಸಂಜಯ್ ಸಿಂಗ್ ಜೊತೆ ನಿಂತು ಕಪಿಲ್ ಫೋಟೋ ತೆಗೆಸಿಕೊಂಡಿದ್ದಾನೆ. ಈತ ಮತ್ತು ತಂದೆ ಒಂದು ವರ್ಷದ ಹಿಂದೆ ಆಪ್ ಸೇರಿದ್ದರು ಅನ್ನೋದು ಕೂಡ ತಿಳಿದುಬಂದಿದೆ.

Contact Us for Advertisement

Leave a Reply