masthmagaa.com:
ಸಿದ್ರಾಮಯ್ಯ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯನ್ನೂ ಬೈದಿದ್ದಾರೆ. ಸೋನಿಯಾ ಗಾಂಧಿಗೆ ಭಾರತೀಯ ಪೌರತ್ವ ನೀಡಬೇಡಿ ಅಂತ ಹೇಳಿದ್ದರು. ಆಗ ಕಾಂಗ್ರೆಸ್ ಪಕ್ಷವನ್ನ ಟೀಕಿಸಿದವರು ಈಗ ಅವರ ಜೊತೆಗೆ ಸೇರಿದ್ದೀರಾ ಅಂತ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಸಿಎಂ ಸಿದ್ರಾಮಯ್ಯರ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಕೆಲಸಕ್ಕೆ ಬಾರದವರನ್ನ ಗೆಲ್ಲಿಸಿದ್ದೀರಿ ಅನ್ನೊ ಸಿಎಂ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿರೋ ಜಿಟಿ ದೇವೇಗೌಡ, ನಾನು 5 ಸಲ ಗೆದ್ದಿದ್ದೀನಿ. ನೀವೇ ನನ್ನ ವಿರುದ್ಧ ಸೋತಿದ್ದೀರಿ. ನೀವು ಈ ಮುಂಚೆ ಸೋನಿಯಾಗಾಂಧಿ ಯವರನ್ನ ವಿದೇಶಿ ಅಂತ ಕರೆದಿದ್ರಿ. ಅವರಿಗೆ ಪೌರತ್ವ ಕೊಡಬೇಡಿ ಅಂದಿದ್ರಿ. ಕಾಂಗ್ರೆಸ್ ಪಕ್ಷವನ್ನು ಸೀಮೆಎಣ್ಣೆ ಪಾರ್ಟಿ ಅಂತ ಹೇಳಿದ್ರಿ. ಬಿಜೆಪಿಯನ್ನು ಬೆಂಕಿ ಪೊಟ್ಟಣ ಪಾರ್ಟಿ ಅಂತ ಹೇಳಿದ್ರಿ ಅಂತ ಸಿದ್ರಾಮಯ್ಯರ ವಿರುದ್ದ ಜಿಟಿ ದೇವೇಗೌಡ ವಾಗ್ದಾಳಿ ಮಾಡಿದ್ದಾರೆ.
-amsthmagaa.com
Contact Us for Advertisement