masthmagaa.com:
ಸಾಮಾಜಿಕ ಜಾಲತಾಣ ಸೇರಿದಂತೆ ಕೆಲವೊಂದುಕಡೆ ಒಮೈಕ್ರಾನ್ ಭಯಕ್ಕೆ ಲಾಕ್ಡೌನ್ ಮಾಡ್ತಾರೆ, ಹಾಗೆ ಹೀಗೆ ಅಂತೆಲ್ಲಾ ಗೊಂದಲ ಸೃಷ್ಟಿ ಮಾಡಲಾಗ್ತಿದೆ, ಸುಳ್ಳು ಸುದ್ದಿಗಳನ್ನ ಹಬ್ಬಿಸಲಾಗ್ತಿದೆ. ಈ ಬಗ್ಗೆ ಸ್ಪಷ್ಟನೆ ಕೊಟ್ಟಿರೋ ಸಿಎಂ ಬೊಮ್ಮಾಯಿ, ಯಾರೂ ಪ್ಯಾನಿಕ್ ಆಗ್ಬೇಡಿ. ಲಾಕ್ಡೌನ್ ಮಾಡೋ ಯಾವ ಪ್ರಸ್ತಾವನೆ ಇಲ್ಲ, ಪ್ಲಾನೂ ಇಲ್ಲ. ಶಾಲೆಗಳ ಮೇಲೆ ನಿಗಾ ಇಡುವಂತೆ ಸೂಚನೆ ಕೊಟ್ಟಿದ್ದೀವಿ ಹೊರತು ಶಾಲೆಗಳನ್ನ ಬಂದ್ ಮಾಡಿ ಅಂತ ಆದೇಶಿಸಿಲ್ಲ. ಜನರು ಭಯ ಪಡುವ ಅಗತ್ಯವಿಲ್ಲ, ಎಚ್ಚರದಿಂದಿರಿ ಎಂದಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿಸಿ ನಾಗೇಶ್ ಕೂಡ, ಸದ್ಯಕ್ಕೆ ಶಾಲೆಗಳನ್ನ ಬಂದ್ ಮಾಡಲ್ಲ. ಬಂದ್ ಮಾಡೋ ಅವಶ್ಯಕತೆ ಬಂದ್ರೆ ಸರ್ಕಾರ ತೀರ್ಮಾನ ಕೈಗೊಳ್ಳುತ್ತೆ ಎಂದಿದ್ದಾರೆ.
-masthmagaa.com
Contact Us for Advertisement