masthmagaa.com:
ಗಾಂಧಿ ಕುಟುಂಬದಿಂದ, 2 ಕೋಟಿ ಮೌಲ್ಯದ ವರ್ಣಚಿತ್ರವನ್ನ ಖರೀದಿಸುವಂತೆ ನನಗೆ ಒತ್ತಾಯ ಮಾಡಲಾಯ್ತು ಅಂತ ಎಸ್ ಬ್ಯಾಂಕ್ನ ಸಹ ಸಂಸ್ಥಾಪಕ ರಾಣಾ ಕಪೂರ್ ಇಡಿ ತನಿಖೆಯ ವೇಳೆ ಹೇಳಿದ್ದಾರೆ. ಎಮ್ಎಫ್ ಹುಸೇನ್ ಅವರು ಬಿಡಿಸಿದ ಚಿತ್ರ ಪ್ರಿಯಾಂಕ ಗಾಂಧಿ ವಾದ್ರ ಬಳಿ ಇತ್ತು. ಇದನ್ನ ಖರೀದಿಸುವಂತೆ ಮಾಜಿ ಇಂಧನ ಸಚಿವರಾದ ಮುರುಳಿ ದೆಯೋರಾ ಒತ್ತಾಯಿಸಿದ್ರು. ನಂತ್ರ ಈ ಹಣವನ್ನ ನ್ಯೂಯಾರ್ಕ್ನಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವ್ರ ವೈದ್ಯಕೀಯ ಚಿಕಿತ್ಸೆಗೆ ಬಳಸಿಕೊಳ್ಳಲಾಗಿದೆ ಅಂತ ಹೇಳಿದ್ದಾರೆ. ಮುಂಬೈನ ವಿಶೇಷ ನ್ಯಾಯಾಲಯಕ್ಕೆ ಜಾರೀ ನಿರ್ದೇಶನಲಾಯ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಈ ಅಂಶಗಳು ಬೆಳಕಿಗೆ ಬಂದಿವೆ. ಜೊತೆಗೆ ಈ ವರ್ಣಚಿತ್ರವನ್ನ ಖರೀದಿಸದಿದ್ದರೆ ಗಾಂಧಿ ಕುಟುಂಬದೊಂದಿಗಿನ ಸಂಬಂಧ ಕಳೆದುಕೊಳ್ಳಬೇಕಾಗುತ್ತೆ ಅಷ್ಟೇ.. ಅಲ್ಲದೇ ನಿಮ್ಗೆ ಪದ್ಮ ಭೂಷಣ ಪ್ರಶಸ್ತಿ ಸಿಗಲ್ಲ ಅಂತ ಬ್ಲಾಕ್ಮೇಲ್ ಮಾಡಿದ್ರು ಅಂತ ಹೇಳಿದ್ದಾರೆ. ಇನ್ನು ಸೋನಿಯಾ ಗಾಂಧಿ ಅವ್ರ ನಂಭಿಕಸ್ತ ದಿವಂತ ಅಹ್ಮದ್ ಪಟೇಲ್ ಕೂಡ ನೀವು ಗಾಂಧಿ ಕುಟುಂಬಕ್ಕೆ ಸಹಾಯ ಮಾಡಿ ಒಳ್ಳೆ ಕೆಲ್ಸ ಮಾಡಿದ್ದೀರಾ.. ನಿಮ್ಮನ್ನ ಪದ್ಮಭೂಷಣ ಪ್ರಶಸ್ತಿಗೆ ಪರಿಗಣಿಸ್ತಾರೆ ಅಂತ ಹೇಳಿದ್ರು ಅಂತಲು ಇಡಿ ಬಳಿ ರಾಣಾ ಕಾಪೂರ್ ಹೇಳಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಯಿಸಿರುವ ಕಾಂಗ್ರೆಸ್, 5 ಸಾವಿರ ಕೋಟಿ ಹಗರಣದಲ್ಲಿ ಭಾಗಿಯಾಗಿರುವ ಇವರಿಂದ ಇನ್ನೇನು ನಿರೀಕ್ಷಿಸಲು ಸಧ್ಯ. ಇವರು ಇವರ ಮೇಲಿರುವ ಕೇಸನ್ನ ಜೀವಂತವಾಗಿಲ್ಲದವರ ಮೇಲೆ ಹೊರಿಸಿ ಜಾಣತನದಿಂದ ಕೈತೊಳೆದುಕೊಳ್ಳಲು ನೋಡ್ತಿದ್ದಾರೆ ಅಂತ ಹೇಳಿದೆ.
-masthmagaa.com
Contact Us for Advertisement