masthmagaa.com:
ಜಮ್ಮು-ಕಾಶ್ಮೀರಕ್ಕೆ ಈ ಹಿಂದೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಮರಳಿ ಪಡೆಯಲು ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ ಸೇರಿದಂತೆ ವಿವಿಧ ಪಕ್ಷಗಳು ಹೋರಾಟ ನಡೆಸುತ್ತಿವೆ. ಇದರ ನಡುವೆಯೇ ಮಾತನಾಡಿರುವ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಮಾತನಾಡಿ, ‘ಜಮ್ಮು-ಕಾಶ್ಮೀರ ಪಾಕಿಸ್ತಾನದ ಜೊತೆ ಸೇರಬೇಕು ಅಂತಿದ್ರೆ 1947ರಲ್ಲೇ ಸೇರುತ್ತಿತ್ತು. ಅದನ್ನ ಯಾರೂ ಕೂಡ ತಡೆಯಲು ಸಾಧ್ಯವಾಗುತ್ತಿರಲಿಲ್ಲ. ಆದ್ರೆ ನಮ್ಮ ದೇಶ ಮಹಾತ್ಮಾ ಗಾಂಧಿಯವರ ಭಾರತ. ಬಿಜೆಪಿಯ ಭಾರತ ಅಲ್ಲ’ ಅಂತ ಹೇಳಿದ್ದಾರೆ.
ಮತ್ತೊಂದುಕಡೆ ಒಮರ್ ಅಬ್ದುಲ್ಲಾ ಮಾತನಾಡಿ, ‘ಆರ್ಟಿಕಲ್ 370 ಮತ್ತು 35A ತೆಗೆದು ಹಾಕುವುದರಿಂದ ಎಲ್ಲಾ ಸಮಸ್ಯೆಗಳೂ ಬಗೆಹರಿಯುತ್ತೆ ಅನ್ನೋ ಭ್ರಮೆಯಲ್ಲಿ ಇರಬೇಡಿ ಅಂತ ನಾವು ಹೇಳ್ತಾನೆ ಬಂದಿದ್ವಿ. ಇವೆರಡನ್ನು ರದ್ದು ಮಾಡಿರೋದು ಜಮ್ಮು-ಕಾಶ್ಮೀರದ ವಿಚಾರದಲ್ಲಿ ಇಟ್ಟ ಅತಿದೊಡ್ಡ ತಪ್ಪು ಹೆಜ್ಜೆಯಾಗಿದೆ. ನಮ್ಮ ನೆಲದಲ್ಲಿ ನಾವೇ ಸೇಫ್ ಇಲ್ಲ ಎನ್ನುವಂತಾಗಿದೆ. ಆರ್ಟಿಕಲ್ 370 ಮತ್ತು 35A ತೆಗೆದು ಹಾಕಿದ ಬಳಿಕ ಇಲ್ಲಿನ ಜನ ದೇಶದ ಇತರ ಭಾಗಗಳ ಜನರಂತೆ ಆಗುತ್ತಾರೆ ಅಂತ ಹೇಳಲಾಗಿತ್ತು. ಆದ್ರೆ ಈಗ ಇಲ್ಲಿನ ಜನ ಮೊದಲಿಗಿಂತಲೂ ದೂರವಾಗಿದ್ದಾರೆ’ ಅಂತ ಹೇಳಿದ್ದಾರೆ.
-masthmagaa.com
Contact Us for Advertisement