ಆಂಧ್ರಪ್ರದೇಶದಲ್ಲಿ ನಾಯಿಗಳ ಮಾರಣಹೋಮ! ಯಾಕೆ ಗೊತ್ತಾ?

masthmagaa.com:

ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯಲ್ಲಿ ಗುಂಡಿಯೊಂದರಲ್ಲಿ 300 ಕ್ಕೂ ಅಧಿಕ ನಾಯಿಗಳ ಶವ ಪತ್ತೆಯಾಗಿದೆ. ಮುನ್ಸಿಪಾಲ್ಟಿಯವರೇ ಬೀದಿನಾಯಿಗಳನ್ನ ಹಿಡಿದು ವಿಷ ಹಾಕಿ ಕೊಂದಿದ್ದಾರೆ ಅಂತ ಪ್ರಾಣಿ ಹಕ್ಕುಗಳ ಹೋರಾಟಗಾರರು ಆರೋಪಿಸಿ ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದಾರೆ. ಎಫ್ಐಆರ್ ಕೂಡ ಆಗಿದೆ. ಸುದ್ದಿ ಕೇಳಿದಾಗ ಅಯ್ಯೋ ಪಾಪ.. 300 ನಾಯಿಗಳು ಹೋದ್ವಲ್ಲ ಅನಿಸುತ್ತೆ. ಅದೇ ರಸ್ತೆಲಿ ಹೋಗುವಾಗ ದಾಳಿಯಿಟ್ಟು ಅದೇ ನಾಯಿಗಳು ನಮ್ಮ ಮೀನಖಂಡದ ಮಾಂಸಖಂಡವನ್ನ ಖಂಡತುಂಡ ಮಾಡಿದ್ರೆ, ಯಾವುದೋ ಮಗುವನ್ನ ಬೀದಿ ನಾಯಿಗಳು ಕಚ್ಚಿ ತಿಂದ್ರೆ ಆಗ ಫೀಲಿಂಗ್ ಚೇಂಜ್ ಆಗುತ್ತೆ. ಸಂದರ್ಭ, ಸ್ಥಿತಿ ಮೇಲೆ ಎಲ್ಲ ಡಿಪೆಂಡ್ ಆಗುತ್ತೆ ನಮ್ಮ ರಿಯಾಕ್ಷನ್.

-masthmagaa.com

Contact Us for Advertisement

Leave a Reply