masthmagaa.com:
ಇಂಟ್ರಸ್ಟಿಂಗ್ ಬೆಳವಣಿಗೆಯಲ್ಲಿ ಅಫ್ಘಾನಿಸ್ತಾನದ ಹಿಂದೂ ಮತ್ತು ಸಿಖ್ರಿಗೆ ಸೇರಿದ್ದ ಆಸ್ತಿ ಹಕ್ಕುಗಳನ್ನ ವಾಪಾಸ್ ಅವರಿಗೇ ಹಿಂದಿರುಗಿಸ್ತೀವಿ ಅಂತ ಅಲ್ಲಿನ ತಾಲಿಬಾನ್ ಆಡಳಿತ ಹೇಳಿದೆ. ಇದಕ್ಕಾಗಿ ತಾಲಿಬಾನ್ಗಳು ಆಯೋಗ ಒಂದನ್ನ ಕೂಡ ರಚಿಸಿದ್ದಾರೆ. ಈ ಬಗ್ಗೆ ರಿಯಾಕ್ಟ್ ಮಾಡಿರೋ ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಾಲಿಬಾನ್ ಆಡಳಿತದ ನಿಲುವನ್ನ ಸ್ವಾಗತಿಸಿದ್ದಾರೆ. ʻಅಫ್ಘಾನ್ನ ಹಿಂದೂ ಮತ್ತು ಸಿಖ್ ಸಮುದಾಯದವ್ರ ಆಸ್ತಿ ಹಕ್ಕುಗಳನ್ನ ಹಿಂದಿರುಗಿಸಲು ತಾಲಿಬಾನ್ ಆಡಳಿತ ಡಿಸೈಡ್ ಮಾಡಿದೆ ಅಂತಂದ್ರೆ…. ಇದೊಂದು ಪಾಸಿಟಿವ್ ಡೆವೆಲಪ್ಮೆಂಟ್ʼ ಅಂತ ಹೇಳಿದ್ದಾರೆ.
-masthmagaa.com
Contact Us for Advertisement