ಸಿಡಿ ಕೇಸ್‌: ಇವತ್ತು ಇಡೀ ದಿನ ಏನ್‌ ಏನಾಯ್ತು

masthmagaa.com:

ರಮೇಶ್ ಜಾರಕಿಹೊಳಿ ಖಾಸಗಿ ವಿಡಿಯೋ ವಿಚಾರ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಲೇ ಇದೆ. ನಿನ್ನೆಯಷ್ಟೇ ಯುವತಿ ತನ್ನ ಕುಟುಂಬದ ಜೊತೆ ಮಾತನಾಡುವಾಗ ಡಿ.ಕೆ ಶಿವಕುಮಾರ್ ಹೆಸರು ಹೇಳಿರೋದು ಹೊಸ ಆಯಾಮ ನೀಡಿದೆ. ಅದ್ರ ಬೆನ್ನಲ್ಲೆ ಇವತ್ತು ಬೆಳಗ್ಗೆ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿರುವ ಯುವತಿ, ನನ್ನ ಸಿಡಿ ರಿಲೀಸ್ ಆದಾಗ ಏನ್ ಆಗ್ತಿದೆ ಅಂತಲೇ ನನಗೆ ಗೊತ್ತಾಗಲಿಲ್ಲ.. ನನ್ನ ಪರಿಚಯಸ್ಥರಾದ ಪತ್ರಕರ್ತ ನರೇಶ್ ಅಣ್ಣಂಗೆ ಕಾಲ್ ಮಾಡ್ದೆ. ಅದಕ್ಕೆ ಅವರು, ಇದು ದೊಡ್ಡ ವಿಚಾರ.. ನಾನು ಕೂಡ ಏನೂ ಮಾಡಕ್ಕಾಗಲ್ಲ. ಸಿದ್ದರಾಮಯ್ಯ ಅಥವಾ ಡಿಕೆ ಶಿವಕುಮಾರ್ ಅವರ ಬಳಿ ಮಾತನಾಡೋಣ ಅಂತ ಹೇಳಿದ್ರು. ಅಷ್ಟೆ.. ಅಂತಾ ಹೇಳಿದ್ದಾರೆ.

ಜೊತೆಗೆ ನನ್ ಅಪ್ಪ ಅಮ್ಮ ಮತ್ತು ಇಬ್ಬರು ಸಹೋದರರನ್ನು ಬೆಂಗಳೂರಿಗೆ ಕರೆತನ್ನಿ.. ಆಮೇಲೆ ನಾನು ಹೇಳಿಕೆ ಕೊಡ್ತೀನಿ ಅಂತ ಹೇಳಿದ್ರು. ಅದ್ರ ಬೆನ್ನಲ್ಲೇ ಎಸ್​​​ಐಟಿ ತಂಡ ಇವತ್ತು ಯುವತಿಯ ಇಡೀ ಫ್ಯಾಮಿಲಿಯನ್ನು ಬಿಗಿಭದ್ರತೆಯೊಂದಿಗೆ ಬೆಂಗಳೂರಿಗೆ ಕರೆತಂದಿದೆ. ಬೆಂಗಳೂರಿನ ಆಡುಗೋಡಿಯಲ್ಲಿರೋ ಟೆಕ್ನಿಕಲ್ ವಿಂಗ್​​ನಲ್ಲಿ ಯುವತಿಯ ಕುಟುಂಬದಿಂದ ಸತತ ಐದು ಗಂಟೆಗೂ ಅಧಿಕ ಕಾಲ ಎಸ್​​​ಐಟಿ ಹೇಳಿಕೆ ದಾಖಲಿಸಿಕೊಂಡಿದೆ. ನಂತರ ಮಾತನಾಡಿದ ಯುವತಿಯ ತಂದೆ, ನನ್ನ ಮಗಳನ್ನು ಡಿಕೆಶಿ ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ಹೆಣ್ಣು ಮಗಳನ್ನು ಇಟ್ಟುಕೊಂಡು ಇಂಥಾ ಹೀನಾಯ ರಾಜಕಾರಣ ಮಾಡಬಾರದು ಅಂತ ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ.

ಇದ್ರ ನಡುವೆಯೇ ಇವತ್ತು ಮಾಧ್ಯಮಗಳೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ನನ್ನ ಬಳಿ 11 ಸಾಕ್ಷ್ಯಗಳಿವೆ. ಅವೆಲ್ಲವನ್ನೂ ಎಸ್​ಐಟಿ ಮುಂದೆ ನೀಡ್ತೀನಿ. ಆ ಮಹಾನಾಯಕನ ಬಗ್ಗೆ ಯುವತಿ ಮತ್ತು ಆ ಕಿಂಗ್​​ಪಿನ್​​ ನರೇಶ್ ಬಹಿರಂಗಪಡಿಸಿದ್ದಾರೆ. ಆ ಮಹಾನಾಯಕ ರಾಜಕಾರಣಕ್ಕೆ ನಾಲಾಯಕ್. ಇಂಥಾ ಷಡ್ಯಂತ್ರ ಮಾಡಬಾರದಿತ್ತು. ಆತನಿಗೆ ಕ್ಷಮೆಯೇ ಇಲ್ಲ.. ನಾನು ಗಂಡಸು.. ಆತ ಇನ್ನೇನೋ ಅಂತ ಕೆಟ್ಟ ಶಬ್ದ ಬಳಸಿ ಬೈದಿದ್ದಾರೆ. ಆ ಮಹಾನಾಯಕನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಿ, ಒದ್ದು ಒಳಗೆ ಹಾಕಬೇಕು ಅಂತ ಹೇಳಿದ್ದಾರೆ. ನಂತರ ಡಿಕೆಶಿ ಬಗ್ಗೆ ಮಾತನಾಡಿದ ಜಾರಕಿಹೊಳಿ, ಕನಕಪುರದಲ್ಲೇ ಹೋಗಿ ಸೋಲಿಸುತ್ತೇನೆ ಅಂತ ಸವಾಲೆಸೆದಿದ್ದಾರೆ.

ಈ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್​, ನರೇಶ್ ನನಗೆ ಗೊತ್ತಿರೋ ಹುಡುಗ.. ಸೋ ಆಕೆ ನರೇಶ್ ಬಳಿ ಬಂದು ಸಹಾಯ ಕೇಳಿದಾಗ ನನ್ನ ಬಳಿಗೆ ಕರೆ ತರೋದಾಗಿ ಹೇಳಿರಬಹುದು.. ಅದು ಬಿಟ್ರೆ ಆಕೆ ನನ್ನ ಬಳಿ ಬಂದೂ ಇಲ್ಲ.. ನನಗೆ ಏನೂ ಗೊತ್ತೂ ಇಲ್ಲ ಅಂತ ಹೇಳಿದ್ಧಾರೆ. ಸರ್ಕಾರ ಅವರದ್ದೇ ಇದೆ ತನಿಖೆ ಮಾಡಲಿ ಎಂದಿದ್ದಾರೆ.

-masthmagaa.com

Contact Us for Advertisement

Leave a Reply