masthmagaa.com:
ಆಗಾಗ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗೋ ಕಾಂಗ್ರೆಸ್ ಹಿರಿಯ ನಾಯಕ ಮತ್ತು ಮಧ್ಯಪ್ರದೇಶದ ಮಾಜಿ ಸಿಎಂ ದಿಗ್ವಿಜಯ್ ಸಿಎಂ ಆ ಪಟ್ಟಿಗೆ ಮತ್ತೊಂದು ಹೇಳಿಕೆಯನ್ನ ಸೇರಿಸಿದ್ದಾರೆ. ಏನ್ ಹೇಳಿದ್ದಾರೆ ಅಂದ್ರೆ, ಗೋಮಾಂಸ ತಿನ್ನುವ ಹಿಂದೂಗಳು ಕೂಡ ಇದ್ದಾರೆ. ಹೆಚ್ಚಿನ ಹಿಂದೂಗಳು ಗೋಮಾಂಸ ಸೇವಿಸೋದ್ರ ವಿರುದ್ಧವಾಗಿದ್ದಾರೆ. ಆದ್ರೆ ಹಿಂದೂ ಧರ್ಮಕ್ಕೂ ಹಿಂದುತ್ವಕ್ಕೂ ಯಾವ್ದೇ ಸಂಬಂಧ ಇಲ್ಲ ಅಂತ ಸ್ವತಃ ಸಾವರ್ಕರ್ ತಮ್ಮ ಪುಸ್ತಕದಲ್ಲಿ ಬರೆದಿದ್ರು. ಅಲ್ಲದೆ ಗೋವು ನಮ್ಮ ತಾಯಿಯಾಗಲು ಸಾಧ್ಯವಿಲ್ಲ. ಹೀಗಾಗಿ ಗೋಮಾಂಸ ಸೇವನೆಯಲ್ಲಿ ಯಾವುದೇ ತಪ್ಪಿಲ್ಲ ಅಂತಾನೂ ಸಾವರ್ಕರ್ ಹೇಳಿದ್ದರು ಅಂತ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
-masthmagaa.com
Contact Us for Advertisement