ಗೋಮಾಂಸ ತಪ್ಪಿಲ್ಲ ಅಂತ ಸಾವರ್ಕರ್ ಹೇಳಿದ್ರು: ಕಾಂಗ್ರೆಸ್ ನಾಯಕ ವಿವಾದಿತ ಹೇಳಿಕೆ

masthmagaa.com:

ಆಗಾಗ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗೋ ಕಾಂಗ್ರೆಸ್ ಹಿರಿಯ ನಾಯಕ ಮತ್ತು ಮಧ್ಯಪ್ರದೇಶದ ಮಾಜಿ ಸಿಎಂ ದಿಗ್ವಿಜಯ್​ ಸಿಎಂ ಆ ಪಟ್ಟಿಗೆ ಮತ್ತೊಂದು ಹೇಳಿಕೆಯನ್ನ ಸೇರಿಸಿದ್ದಾರೆ. ಏನ್​ ಹೇಳಿದ್ದಾರೆ ಅಂದ್ರೆ, ಗೋಮಾಂಸ ತಿನ್ನುವ ಹಿಂದೂಗಳು ಕೂಡ ಇದ್ದಾರೆ. ಹೆಚ್ಚಿನ ಹಿಂದೂಗಳು ಗೋಮಾಂಸ ಸೇವಿಸೋದ್ರ ವಿರುದ್ಧವಾಗಿದ್ದಾರೆ. ಆದ್ರೆ ಹಿಂದೂ ಧರ್ಮಕ್ಕೂ ಹಿಂದುತ್ವಕ್ಕೂ ಯಾವ್ದೇ ಸಂಬಂಧ ಇಲ್ಲ ಅಂತ ಸ್ವತಃ ಸಾವರ್ಕರ್​​ ತಮ್ಮ ಪುಸ್ತಕದಲ್ಲಿ ಬರೆದಿದ್ರು. ಅಲ್ಲದೆ ಗೋವು ನಮ್ಮ ತಾಯಿಯಾಗಲು ಸಾಧ್ಯವಿಲ್ಲ. ಹೀಗಾಗಿ ಗೋಮಾಂಸ ಸೇವನೆಯಲ್ಲಿ ಯಾವುದೇ ತಪ್ಪಿಲ್ಲ ಅಂತಾನೂ ಸಾವರ್ಕರ್ ಹೇಳಿದ್ದರು ಅಂತ ದಿಗ್ವಿಜಯ್​ ಸಿಂಗ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply