(ಕಾಂಗ್ರೆಸ್​ನ ಮತ್ತೊಂದು ವಿಕೆಟ್​ ಪತನ: ಸಿಎಂ ಇಬ್ರಾಹಿಂ ಗುಡ್​​ಬೈ!

masthmagaa.com:

ಕಾಂಗ್ರೆಸ್​ನ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ, ಸದ್ಯ ವಿಧಾನ ಪರಿಷತ್ ಸದಸ್ಯರಾಗಿರೋ ಸಿಎಂ ಇಬ್ರಾಹಿಂ ಕಾಂಗ್ರೆಸ್​​ ಪಕ್ಷವನ್ನ ತೊರೆಯೋ ಸುಳಿವು ಕೊಟ್ಟಿದ್ದಾರೆ. ಕಾಂಗ್ರೆಸ್​ಗೂ ನಮಗೂ ಇನ್ನು ಮುಗಿದ ಅಧ್ಯಾಯ ಅಂತ ಅವರು ಹೇಳಿದ್ದಾರೆ. ಇತ್ತೀಚೆಗಷ್ಟೇ ವಿಧಾನಪರಿಷತ್ ವಿಪಕ್ಷ ಸ್ಥಾನ ಬಿ.ಕೆ. ಹರಿಪ್ರಸಾದ್​ ಪಾಲಾಗಿತ್ತು. ಇದರಿಂದ ವಿಪಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಇಬ್ರಾಹಿಂಗೆ ನಿರಾಸೆಯಾಗಿತ್ತು.
ಸಿಎಂ ಇಬ್ರಾಹಿಂ ನಡೆ ಬಗ್ಗೆ ಸಿದ್ದರಾಮಯ್ಯ ಅವರನ್ನ ಕೇಳ್ದಾಗ, ನಾನು ಮಾಧ್ಯಮದವರಿಗೆ ಏನೂ ಹೇಳಲ್ಲ, ಇಬ್ರಾಹಿಂ ಜೊತೆ ಮಾತಾಡ್ತೀನಿ ಅಂದ್ರು. ಇನ್ನು ಜೆಡಿಎಸ್​ನ ಹೆಚ್​.ಡಿ. ಕುಮಾರಸ್ವಾಮಿ ಮಾತನಾಡಿ, ದೇವೇಗೌಡ್ರು ಮತ್ತು ಜೆಡಿಎಸ್​ ಉಳಿಬೇಕು ಅನ್ನೋ ಆಸೆ ಅವರಿಗಿದೆ. ಅವರು ಪಕ್ಷಕ್ಕೆ ಬಂದ್ರೆ ಸ್ವಾಗತ ಎಂದಿದ್ದಾರೆ.

-masthmagaa.com

Contact Us for Advertisement

Leave a Reply