ಸಿದ್ದು VS ಡಿಕೆಶಿ ಯುದ್ಧಕ್ಕೆ ಹೈಕಮಾಂಡ್ ಕದನ ವಿರಾಮ!

masthmagaa.com:

ಇತ್ತ ಬಿಜೆಪಿಯಲ್ಲಿ ಸಿಎಂ ಬದಲಾವಣೆ ಗಲಾಟೆ ಜೋರಾಗಿದ್ರೆ ಮತ್ತೊಂದ್ಕಡೆ ಕಾಂಗ್ರೆಸ್​ನಲ್ಲೂ ನಾಯಕತ್ವದ ಜಟಾಪಟಿ ಜೋರಾಗಿದೆ. ಅದ್ರ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​​​​ರನ್ನು ದೆಹಲಿಗೆ ಕರೆಸಿಕೊಂಡಿದ್ದ ಹೈಕಮಾಂಡ್ ಸಂಧಾನ ನಡೆಸಿದೆ. ಸದ್ಯಕ್ಕೆ ಇಬ್ಬರ ನಡುವಿನ​ ನಡುವಿನ ಶೀತಲ ಸಮರಕ್ಕೆ ಹೈಕಮಾಂಡ್​​ ಕದನ ವಿರಾಮ ಘೋಷಿಸಿದಂತಿದೆ. ಇಂದು ಬಲಭಾಗದಲ್ಲಿ ಸಿದ್ದರಾಮಯ್ಯ ಮತ್ತು ಎಡಭಾಗದಲ್ಲಿ ಡಿಕೆ ಶಿವಕುಮಾರ್​ರನ್ನು ಕೂರಿಸಿಕೊಂಡು ಸುದ್ದಿಗೋಷ್ಠಿ ನಡೆಸಿದ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ, ಇಬ್ಬರೂ ನಾಯಕರು ಒಟ್ಟಿಗೇ ಕೆಲಸ ಮಾಡ್ತಾರೆ. ನಾವು ಸಿಎಂ ಕ್ಯಾಂಡಿಡೇಟ್ ಅಂತ ಯಾರ ಹೆಸರನ್ನೂ ಘೋಷಿಸಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply