masthmagaa.com:
ಇತ್ತ ಬಿಜೆಪಿಯಲ್ಲಿ ಸಿಎಂ ಬದಲಾವಣೆ ಗಲಾಟೆ ಜೋರಾಗಿದ್ರೆ ಮತ್ತೊಂದ್ಕಡೆ ಕಾಂಗ್ರೆಸ್ನಲ್ಲೂ ನಾಯಕತ್ವದ ಜಟಾಪಟಿ ಜೋರಾಗಿದೆ. ಅದ್ರ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ರನ್ನು ದೆಹಲಿಗೆ ಕರೆಸಿಕೊಂಡಿದ್ದ ಹೈಕಮಾಂಡ್ ಸಂಧಾನ ನಡೆಸಿದೆ. ಸದ್ಯಕ್ಕೆ ಇಬ್ಬರ ನಡುವಿನ ನಡುವಿನ ಶೀತಲ ಸಮರಕ್ಕೆ ಹೈಕಮಾಂಡ್ ಕದನ ವಿರಾಮ ಘೋಷಿಸಿದಂತಿದೆ. ಇಂದು ಬಲಭಾಗದಲ್ಲಿ ಸಿದ್ದರಾಮಯ್ಯ ಮತ್ತು ಎಡಭಾಗದಲ್ಲಿ ಡಿಕೆ ಶಿವಕುಮಾರ್ರನ್ನು ಕೂರಿಸಿಕೊಂಡು ಸುದ್ದಿಗೋಷ್ಠಿ ನಡೆಸಿದ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ, ಇಬ್ಬರೂ ನಾಯಕರು ಒಟ್ಟಿಗೇ ಕೆಲಸ ಮಾಡ್ತಾರೆ. ನಾವು ಸಿಎಂ ಕ್ಯಾಂಡಿಡೇಟ್ ಅಂತ ಯಾರ ಹೆಸರನ್ನೂ ಘೋಷಿಸಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.
-masthmagaa.com
Contact Us for Advertisement