“ನನ್ನ ಮತ್ತು ಕಂಗನಾ ಬಿಟ್ರೆ ಬಾಲಿವುಡ್‌ನ ಪ್ರಶ್ನೆ ಮಾಡೋರು ಯಾರು ಇಲ್ಲ”: ವಿವೇಕ್‌ ಅಗ್ನಿಹೋತ್ರಿ !

masthmagaa.com:

ಬಾಲಿವುಡ್‌ ನಿರ್ಮಾಪಕ ಮತ್ತು ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಇತ್ತೀಚಿಗೆ ಬಾಲಿವುಡ್‌ ವಿಷಯಗಳ ಬಗ್ಗೆ ಬೆರಳು ತೋರಿಸಿ ಮಾತಾಡ್ತಾ ಇದಾರೆ. ಥೇಟರ್‌ನಲ್ಲಿ ಬಾಲಿವುಡ್‌ ಮೂವಿಗಳು ಏಕೆ ಜನರಿಗೆ ಇಷ್ಟ ಆಗ್ತಾ ಇಲ್ಲ ಅನ್ನೋ ಬಗ್ಗೆ ಕೂಡ ಮಾತನಾಡಿದ್ದಾರೆ. ನನ್ನ ಮತ್ತು ಕಂಗಾನಾ ಬಿಟ್ರೆ ಬೇರೆ ಯಾರು ಮಾತಾಡೋದಿಲ್ಲ ಅಂತ ಹೇಳಿ ಅಚ್ಚರಿ ಮೂಡಿಸಿದ್ದಾರೆ.

ವಿವೇಕ್‌ ಅಗ್ನಿಹೋತ್ರಿ ಸುಧೀರ್‌ ಮಿಶ್ರಾ ಜೊತೆ ಇತ್ತೀಚಿಗೆ ಪಾಡ್‌ಕಾಸ್ಟ್‌ನ ಸಂದರ್ಶನದಲ್ಲಿ ಭಾಗವಹಿಸಿದ್ರು. ಈ ಸಮಯದಲ್ಲಿ “ನಾನು ಬಾಲಿವುಡ್‌ನಲ್ಲಿ ಸಂಪೂರ್ಣವಾಗಿ ಬಹಿಷ್ಕಾರ ಆಗಿದ್ದೀನಿ. ಆದರೆ ಮಧ್ಯಮ ವರ್ಗದ ಒಬ್ಬ ಗೃಹಿಣಿಯ ಮಾತಿಂದ ನಾನು ಸಮಧಾನ ಪಟಿದ್ದೀನಿ. ಆ ಗೃಹಿಣಿಗೆ ನಾನು ಬಾಲಿವುಡ್‌ ಸಿನಿಮಾ ಬಗ್ಗೆ ಪ್ರಶ್ನೆ ಕೇಳಿದೆ. ಜನ ಯಾಕೆ ಬಾಲಿವುಡ್‌ ಸಿನಿಮಾವನ್ನ ನೋಡೋಕೆ ಇಷ್ಟ ಪಡ್ತಿಲ್ಲ ಅನ್ನೋದಕ್ಕೆ ನನಗೆ ಉತ್ತರ ಸಿಕ್ಕಿತು. ದೈಹಿಕ ವರ್ತನೆ ಸರಿ ಇಲ್ಲ, ಅಸಭ್ಯವಾದ ಬಟ್ಟೆಗಳು, ಸಮಾಜಕ್ಕೆ ಸಂದೇಶ ಇಲ್ಲದೇ ಸಿನಿಮಾಗಳನ್ನ ಮಾಡ್ತಾ ಇರೋದು ,ಜನರಿಗೆ ಕಿರಿಕಿರಿ ಆಗಿದೆ ಅಂತ ಆಕೆ ಹೇಳಿದ್ದಾಳೆ” ಅಂತ ಅಗ್ನಿಹೋತ್ರಿ ಹೇಳಿದ್ರು.

ಹಾಗೇ ಮುಂದುವರೆದು, ಕರಣ್‌ ಜೋಹರ್‌ ನಿರ್ದೇಶನದ ಸ್ಟುಡೆಂಟ್‌ ಆಫ್‌ ದಿ ಇಯರ್‌ ಸಿನಿಮಾವನ್ನ ಉದಾಹರಣೆ ತಗೊಂಡು “ಸ್ಟುಡೆಂಟ್‌ ಆಫ್‌ ದಿ ಇಯರ್‌ ಸಿನಿಮಾ ನೋಡಿ, ಅದು ನಮ್ಮ ಸಮಾಜಕ್ಕೆ ಯಾವ ರೀತಿ ಸಂದೇಶ ಕೊಡತ್ತೆ. ಆ ಸಿನಿಮಾದಲ್ಲಿದ್ದ ಯುವಕರು ನಿಜವಾಗ್ಲೂ ನಮ್ಮ ದೇಶದ ಯುವಕರ? ಅಂತ ನನಗೆ ಡೌಟ್‌ ಬಂದಿತ್ತು. ನನಗೆ ಯಾವ್ದೇ ದುರುದ್ದೇಶ ಇಲ್ಲ. ಆ ಸಿನಿಮಾದಲ್ಲಿ ಯುವಕರನ್ನ ತೋರಿಸಿದ ರೀತಿ ನೋಡಿ, ಅದೆಲ್ಲಾ ಅಸಭ್ಯ ಅಂತ ಅನ್ಸತ್ತೆ. ಸೆನ್ಸ್‌ ಇಲ್ಲದೇ ಇರುವಂತ ಸಿನಿಮಾಗಳನ್ನ ಸಮಾಜಕ್ಕೆ ಯಾಕೆ ಕೊಡಬೇಕು.” ಅಂತ ಹೇಳಿದ್ದಾರೆ.

ಇನ್ನು ಸುಧೀರ್‌ ಮಿಶ್ರಾ ಕೇಳಿದ ಪ್ರೇಕ್ಷಕರು ಸೋಮಾರಿಗಳ ? ಎಂಬ ಪ್ರಶ್ನೆಗೆ ಉತ್ತರಿಸಿದ ವಿವೇಕ್‌ ಅಗ್ನಿಹೋತ್ರಿ “ಪ್ರೇಕ್ಷಕರು ಸೋಮಾರಿಗಳಲ್ಲ, ಆದರೆ ಈಗ ಬರ್ತಾ ಇರುವಂತ ಸಿನಿಮಾಗಳನ್ನ ನಾವು ನೋಡಿದ್ರೆ ಗೊತ್ತಾಗತ್ತೆ ಚಿತ್ರಗಳನ್ನ ಪ್ರೇಕ್ಷಕರು ಯಾಕೆ ನೋಡಬೇಕು, ಚಿತ್ರದಲ್ಲಿ ಏನ್‌ ಸಂದೇಶ ಇದೆ ಇದೆಲ್ಲಾ ಮುಖ್ಯ ಆಗತ್ತೆ. ಆದ್ರೆ ನಾವು ಈವಾಗ ಎಲ್ಲಿಗೆ ಹೋಗ್ತಾ ಇದೀವಿ. ಮನಮೋಹನ್ ದೇಸಾಯಿ ಅವರ ಚಿತ್ರಗಳು ಎಷ್ಟೋ ಮಧ್ಯಮ ವರ್ಗದ ಜನರ ಕಷ್ಟಗಳನ್ನ ಸಮಾಜಕ್ಕೆ ಅರ್ಥ ಮಾಡಿಸಿದೆ. ಆದರೆ ಈಗ ಬರುವಂತ ಸಿನಿಮಾಗಳಲ್ಲಿ ಮಧ್ಯಮ ವರ್ಗದ ಜನ ಎಲ್ಲಿದ್ದಾರೆ.? ನಾನು ಮತ್ತೆ ಕಂಗನಾ ರಣಾವತ್‌ ಅವರನ್ನ ಹೊರತು ಪಡಿಸಿ ಚಿತ್ರರಂಗದಲ್ಲಿ ಆಗ್ತಾ ಇರುವ ತಪ್ಪುಗಳ ಬಗ್ಗೆ ಯಾರೂ ಕೂಡ ಮಾತಾಡೋದಿಲ್ಲ. ಚಿತ್ರಗಳಲ್ಲಿ ಏನದ್ರೂ ತಪ್ಪಾದರೆ ಅದನ್ನ ಪ್ರಶ್ನಿಸುವ ಹಕ್ಕು ನಮಗಿದೆ. ಕನಿಷ್ಟ ಬುದ್ದಿ ಜೀವಿಗಳು ಅಂತ ಅನಿಸಿಕೊಂಡವರು ಈ ಕೆಲಸವನ್ನ ಮಾಡಬೇಕು. ನನ್ನ ಮತ್ತು ಕಂಗನಾ ಅವರನ್ನ ಬಿಟ್ಟರೆ ಇದೆಲ್ಲದರ ಬಗ್ಗೆ ಬೇರೆ ಯಾರು ಪ್ರಶ್ನೆ ಮಾಡಿದ್ದಾರೆ.? ಹಾಗಾಗಿ ನನ್ನನ್ನ ಕೂಡ ದೂರ ಇರೋಕೆ ಪ್ರಯತ್ನ ಮಾಡ್ತಾ ಇದಾರೆ. ಸತ್ಯ ಹೇಳ್ತಾ ಇದೀನಿ, ನಾನೇಕೆ ದೂರ ಇರಬೇಕು” ಅಂತ ಕಿಡಿಕಾರಿದ್ದಾರೆ.

-masthmagaa.com

Contact Us for Advertisement

Leave a Reply