masthmagaa.com:
ಕೊರೋನಾ ಹಾವಳಿಯಿಂದಾಗಿ ಭಾರತದಲ್ಲಿ ಆರೋಗ್ಯ ವ್ಯವಸ್ಥೆ ಒತ್ತಡದಲ್ಲಿದೆ. ಈ ನಡುವೆ ಒಂದೊಂದೇ ಮನಕಲಕುವ ಘಟನೆಗಳು ವರದಿಯಾಗುತ್ತಲೇ ಇವೆ. ಇದೀಗ ಉತ್ತರ ಪ್ರದೇಶದ ಶ್ಯಾಮ್ಲಿಯಲ್ಲಿ ಮಹಿಳೆಯೊಬ್ಬರ ಮೃತದೇಹವನ್ನು ಗಾರ್ಬೇಜ್ ವ್ಯಾನ್ನಲ್ಲಿ ಸಾಗಿಸಲಾಗಿದೆ. ಅ ಮಹಿಳೆಯ ಸಹೋದರ ನಗರ ಪಾಲಿಕೆಗೆ ಕರೆ ಮಾಡಿ, ನನ್ನ ಸಹೋದರಿ ಸಾವನ್ನಪ್ಪಿದ್ಧಾಳೆ. ಕೊರೋನಾ ಭಯದಿಂದಾಗಿ ಸ್ಮಶಾನಕ್ಕೆ ಶವ ಸಾಗಿಸಲು ಯಾರೂ ಮುಂದೆ ಬರುತ್ತಿಲ್ಲ. ದಯವಿಟ್ಟು ಸಹಾಯ ಮಾಡಿ ಅಂತ ಬೇಡಿಕೊಂಡಿದ್ದಾನೆ. ಸ್ವಲ್ಪ ಹೊತ್ತಿನ ಬಳಿಕ ನಗರ ಪಾಲಿಕೆ ಕಡೆಯಿಂದ ಗಾರ್ಬೇಜ್ ವ್ಯಾನ್ ಕಳುಹಿಸಲಾಗಿದೆ. ನಂತರ ಅದರಲ್ಲೇ ಶವ ಸಾಗಿಸಲಾಗಿದೆ. ಇದರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
-masthmagaa.com
Contact Us for Advertisement