masthmagaa.com:
ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದಾರೆ. ಕಾರ್ಯಕರ್ತರ ಸಭೆ ಒಂದರ ವೇಳೆ ಯತೀಂದ್ರ, ಗೃಹ ಸಚಿವ ಅಮಿತ್ ಶಾರನ್ನ ಗೂಂಡಾ, ರೌಡಿ, ಅವರ ವಿರುದ್ಧ ಕ್ರಿಮಿನಲ್ ಕೇಸ್ಗಳಿವೆ. ಅಮಿತ್ ಶಾ ಗುಜರಾತ್ನಲ್ಲಿ ನರಮೇಧ ನಡೆಸಿದ್ದಾರೆ ಅಂತೇಳಿದ್ದಾರೆ. ಈ ವಿಚಾರವಾಗಿ ರಾಜ್ಯ ಬಿಜೆಪಿ ಆಕ್ರೊಶ ಹೊರಹಾಕಿದೆ. ಯತೀಂದ್ರ ತಂದೆ ಹೆಸರು ಹೇಳ್ಕೊಂಡು ರಾಜಕೀಯಕ್ಕೆ ಬಂದೋರು, ಅಮಿತ್ ಶಾ ಬೂತ್ ಮಟ್ಟದಲ್ಲಿ ಕೆಲಸ ಮಾಡಿರೋರು ಅಂತ ಸಿಟಿ ರವಿ ಟಾಂಗ್ ಕೊಟ್ಟಿದ್ದಾರೆ. ಅಲ್ಲದೆ ಯತೀಂದ್ರ ವಿರುದ್ಧ ಚುನಾವಣೆ ಆಯೋಗಕ್ಕೆ ದೂರು ನೀಡೋದಾಗಿ ಬಿಜೆಪಿ ಮುಖಂಡರು ಹೇಳಿದ್ದಾರೆ.
ಇನ್ನೊಂದ್ಕಡೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಬಿಜೆಪಿ ಜೊತೆಗೆ ಮಾಡ್ಕೊಂಡಿರೊ ಮೈತ್ರಿ ತಾತ್ಕಾಲಿಕ ಅಲ್ಲ, ಲೋಕಸಭೆ ಎಲೆಕ್ಷನ್ ಬಳಿಕವೂ ಇರುತ್ತೆ, ಮೈತ್ರಿಗೆ ಭದ್ರ ಬುನಾದಿ ಹಾಕಿದ್ರೆ ಕಾಂಗ್ರೆಸ್ ಗೆಲುವು ಅಸಾಧ್ಯ ಅಂತ HDK ಹೇಳಿದ್ದಾರೆ.
-masthmagaa.com
Contact Us for Advertisement