masthmagaa.com:
ಉತ್ತರಪ್ರದೇಶ: ಶಾಲಾ ಶಿಕ್ಷಕಿಯನ್ನು ಗುಂಡಿಕ್ಕಿ ಕೊಂದ ವ್ಯಕ್ತಿಯೊಬ್ಬನನ್ನು ಪೊಲೀಸರ ಸಮ್ಮುಖದಲ್ಲಿ ಜನರೇ ಥಳಿಸಿ ಕೊಂದ ಭೀಕರ ಘಟನೆ ಉತ್ತರ ಪ್ರದೇಶದ ಕುಷಿನಗರದಲ್ಲಿ ನಡೆದಿದೆ. ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಕ್ತಿಯನ್ನು ಥಳಿಸಲು ಜನರ ಗುಂಪು ದೊಣ್ಣೆಗಳನ್ನು ಬಳಸಿರೋದು ಕಂಡುಬಂದಿದೆ. ಈ ವೇಳೆ ಜನರನ್ನು ತಡೆಯಲು ಕೆಲ ಪೊಲೀಸರು ಪ್ರಯತ್ನಿಸಿದ್ರೆ ಇನ್ನೂ ಕೆಲ ಪೊಲೀಸರು ಸುಮ್ಮನೆ ನಿಂತಿದ್ದರು ಅಂತ ಹೇಳಲಾಗ್ತಿದೆ.
ಅಂದ್ಹಾಗೆ ಆರೋಪಿಯು ಗೋರಖ್ಪುರದವನಾಗಿದ್ದು, ಇಂದು ಬೆಳಗ್ಗೆ ತನ್ನ ತಂದೆಯ ಬಂದೂಕಿನಿಂದ ಶಿಕ್ಷಕಿಗೆ ಗುಂಡಿಕ್ಕಿ ಕೊಂದಿದ್ದಾನೆ. ಬಳಿಕ ಮನೆಯ ಟೆರಸ್ ಮೇಲೆ ಹತ್ತಿ ಜನರತ್ತ ಬಂದೂಕು ತೋರಿಸಿ ಅವರನ್ನು ಹೆದರಿಸಿದ್ದಾನೆ. ಸ್ಥಳಕ್ಕೆ ಪೊಲೀಸರು ಬಂದಾಗ ಶರಣಾಗುವುದಾಗಿ ಹೇಳಿದ್ದಾನೆ. ಆತನನ್ನ ಕೆಳಗಿಳಿಸಿ ಪೊಲೀಸ್ ವಾಹನದಲ್ಲಿ ಕೂರಿಸಲು ಕರೆದುಕೊಂಡು ಹೋಗುವಾಗ ಅಲ್ಲಿದ್ದ ಜನರ ಗುಂಪು ಆತನನ್ನ ಎಳೆದೊಯ್ದು ಬಡಿಗೆ, ದೊಣ್ಣೆಗಳಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪರಿಣಾಮ ಆತ ಅಲ್ಲೇ ಜೀವ ಬಿಟ್ಟಿದ್ದಾನೆ.
-masthmagaa.com
Contact Us for Advertisement