masthmagaa.com:
ಐಪಿಎಲ್ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ 16 ರನ್ಗಳ ಸೋಲು ಅನುಭವಿಸಿದೆ. ನಾಯಕ ಧೋನಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದಿದ್ದೇ ಸಿಎಸ್ಕೆ ಸೋಲಿಗೆ ಕಾರಣ, ಒಂದ್ವೇಳೆ ಧೋನಿ ಸ್ವಲ್ಪ ಬೇಗ ಬ್ಯಾಟಿಂಗ್ ಬಂದಿದ್ದರೆ ತಂಡ ಗೆಲ್ಲುತ್ತಿತ್ತು ಅನ್ನೋ ಮಾತುಗಳು ಕೇಳಿ ಬರ್ತಿವೆ.
217 ರನ್ನಂತಹ ದೊಡ್ಡ ಟಾರ್ಗೆಟ್ ಚೇಸ್ ಮಾಡುವಾಗ ಧೋನಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದಿದ್ದು ಅಭಿಮಾನಿಗಳಿಗೂ ಬೇಸರ ತಂದಿದೆ. ಋತುರಾಜ್ ಗಾಯಕ್ವಾಡ್, ಸ್ಯಾಮ್ ಕರನ್, ಕೇದಾರ್ ಜಾಧವ್ಗಿಂತಲೂ ಮೊದಲು ಧೊನಿ ಬರಬೇಕಿತ್ತು. ಆಗ ಪಂದ್ಯದ ಗತಿಯೇ ಬದಲಾಗ್ತಿತ್ತು ಎಂಬ ಚರ್ಚೆಗಳು ನಡೆಯುತ್ತಿವೆ.
ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕೂಡ ಧೋನಿ ವಿರುದ್ಧ ವಾಗ್ದಾಳಿ ನಡೆಸಿದ್ದು, 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದಿದ್ದರಲ್ಲಿ ಯಾವುದೇ ಅರ್ಥವಿಲ್ಲ ಅಂತ ಹೇಳಿದ್ದಾರೆ. ‘7ನೇ ಕ್ರಮಾಂಕದಲ್ಲಿ ಧೋನಿ ಬ್ಯಾಟಿಂಗ್ಗೆ ಬಂದಿದ್ದು ನನಗೆ ನಿಜವಾಗಲೂ ಆಶ್ಚರ್ಯ ತಂದಿತ್ತು. ಋತುರಾಜ್ ಗಾಯಕ್ವಾಡ್ ಮತ್ತು ಸ್ಯಾಮ್ ಕರನ್ ಅವರನ್ನು ಮೊದಲು ಕಳಿಸಿದ್ದರಲ್ಲಿ ಅರ್ಥವೇ ಇಲ್ಲ. ನೀವು ಮುಂದೆ ನಿಂತು ತಂಡವನ್ನು ಮುನ್ನಡೆಸಬೇಕು. ತಂಡವನ್ನು ಮುನ್ನಡೆಸುವುದು ಅಂದ್ರೆ ಇದಲ್ಲ. 217 ರನ್ ಚೇಸ್ ಮಾಡುವಾಗ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿಯುವುದು ಎಷ್ಟು ಸರಿ..? ಆಗ ಆಟವೇ ಮುಗಿದಿತ್ತು. ಡುಪ್ಲೆಸಿಸ್ ಏಕಾಂಗಿ ಹೋರಾಟ ನಡೆಸಿದ್ರು’ ಅಂತ ಧೋನಿ ನಿರ್ಧಾರವನ್ನು ಗೌತಮ್ ಗಂಭೀರ್ ಟೀಕಿಸಿದ್ದಾರೆ.
-masthmagaa.com
Contact Us for Advertisement