masthmagaa.com
ಹೈದರಾಬಾದ್: ಮುಸ್ಲಿಂ ಸಮುದಾಯದವರು ಹೆಚ್ಚಿರುವ ‘ಹೈದರಾಬಾದ್ ಓಲ್ಡ್ ಸಿಟಿಯಲ್ಲಿ ಬಿಜೆಪಿ ಬೆಂಬಲಿಗರು ಮತ್ತು ಹಿಂದೂಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಭಾರತೀಯ ಜನತಾ ಪಕ್ಷ ಅವರಿಗೆ ರಕ್ಷಣೆ ನೀಡಿ, ಕಾಪಾಡುತ್ತದೆ. ಒಂದ್ವೇಳೆ ಹಿಂದೂಗಳು ಮತ್ತು ಬಿಜೆಪಿ ಬೆಂಬಲಿಗರ ಕಡೆ ಯಾರಾದ್ರೂ ಬೊಟ್ಟು ಮಾಡಿದ್ರೆ ಅವರ ಕೈಯನ್ನೇ ಕತ್ತರಿಸುತ್ತೇವೆ’ ಅಂತ ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.
ಹೈದರಾಬಾದ್ನ ಅಲ್ವಾಲ್ ಎಂಬಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ರೀತಿ ಹೇಳಿದ್ದಾರೆ. ಈ ಮೂಲಕ ವಿವಾದದ ಕಿಡಿಯನ್ನು ಹೊತ್ತಿಸಿದ್ದಾರೆ. ಅಂದ್ಹಾಗೆ ಹೈದರಾಬಾದ್ ಓಲ್ಡ್ ಸಿಟಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಮುಸ್ಲಿಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
https://twitter.com/ANI/status/1303222209360478208
-masthmagaa.com
Contact Us for Advertisement