masthmagaa.com:
ದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಪೀಡಿತರ ಸಂಖ್ಯೆ 525ಕ್ಕೆ ಏರಿಕೆಯಾಗಿದೆ. ದೇಶದ ಬಹುತೇಕ ರಾಜ್ಯಗಳು ಬಂದ್ ಆಗಿದ್ದು, ಹಲವೆಡೆ ಕರ್ಫ್ಯೂ ಕೂಡ ಹೇರಲಾಗಿದೆ. ಈ ನಡುವೆ ಇವತ್ತು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸದ್ಯದ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದ್ರು. ಬಳಿಕ ಮಾತನಾಡಿದ ಅವರು, ಈವರೆಗೆ ಕೊರೋನಾ ಪತ್ತೆಯಾದವರಲ್ಲಿ ಹೆಚ್ಚಿನವರು ವಿದೇಶದಿಂದ ಮರಳಿದವರೇ ಆಗಿದ್ದಾರೆ. ಕಳೆದ ದಿನಗಳಲ್ಲಿ ಭಾರತಕ್ಕೆ ವಿವಿಧ ದೇಶಗಳಿಗೆ ಒಟ್ಟು 14 ಲಕ್ಷ ಮಂದಿ ಬಂದಿದ್ದಾರೆ. ಇವರಲ್ಲಿ 8 ಸಾವಿರ ಮಂದಿ ಐಸೋಲೇಷನ್ ವಾರ್ಡ್ನಲ್ಲಿ ಅಡ್ಮಿಟ್ ಆಗಿದ್ದಾರೆ. ಇನ್ನು 1,87,000 ಜನರ ಮೇಲೆ ನಿಗಾ ಇರಿಸಲಾಗಿದೆ. ಹೀಗಾಗಿ ಯಾರೂ ಕೂಡ ಮನೆಯಿಂದ ಹೊರಗೆ ಬರಬೇಡಿ.. ಯಾರ ಸಂಪರ್ಕಕ್ಕೂ ಬರಬೇಡಿ ಎಂದು ಮನವಿ ಮಾಡಿದ್ದಾರೆ.
-masthmagaa.com
Contact Us for Advertisement