ಜಂತರ್​​ಮಂತರ್​​ನಲ್ಲಿ ರೈತರ ಹೋರಾಟಕ್ಕೆ ಅನುಮತಿ ಕೊಟ್ಟ ದೆಹಲಿ ಸರ್ಕಾರ!

masthmagaa.com:

ಜಂತರ್​ ಮಂತರ್​​ನಲ್ಲಿ ಪ್ರತಿಭಟನೆ ಅಂದ್ರೆ ಕಿಸಾನ್ ಸನ್​ಸದ್​​ ನಡೆಸೋಕೆ ದೆಹಲಿ ಸರ್ಕಾರ ಅನುಮತಿ ನೀಡಿದೆ. ಪ್ರತಿದಿನ 200 ಮಂದಿ ಪ್ರತಿಭಟನೆಯಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿದೆ. ಜುಲೈ 22 ಅಂದ್ರೆ ನಾಳೆಯಿಂದ ಆಗಸ್ಟ್​ 9ರವರೆಗೆ ಈ ಧರಣಿಗೆ ಅನುಮತಿ ನೀಡಿ, ದೆಹಲಿ ಸರ್ಕಾರ ಆದೇಶಿಸಿದೆ. ಅದೇ ರೀತಿ ಕೊರೋನಾ ನಿಯಮಗಳನ್ನು ಕೂಡ ಕಡ್ಡಾಯವಾಗಿ ಪಾಲಿಸಬೇಕು ಅಂತ ಕೂಡ ಕಟ್ಟಪ್ಪಣೆ ಮಾಡಿದೆ. ಪೊಲೀಸರು ಕೂಡ ಪ್ರತಿಭಟನೆಗೆ ಸಮ್ಮತಿಸಿದ್ದು, ಜನವರಿ 26ರಂದು ಆದಂತೆ ಪರಿಸ್ಥಿತಿ ಕೈಮೀರಿ ಹೋಗದಂತೆ ತಡೆಯೋಕೆ ಏನೆಲ್ಲಾ ವ್ಯವಸ್ಥೆ ಬೇಕೋ ಅವೆಲ್ಲವನ್ನೂ ಮಾಡ್ಕೊಂಡಿದೀವಿ ಅಂತ ಕೂಡ ಪೊಲೀಸರು ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply