ತರಕಾರಿ, ದಿನಸಿ ತರಲು ಹೋದವನು ಮದುವೆಯಾಗಿ ಬಂದ..!

masthmagaa.com:

ಉತ್ತರ ಪ್ರದೇಶ: ಲಾಕ್​ಡೌನ್​ ವೇಳೆ ಯುವಕನೊಬ್ಬ ತರಕಾರಿ, ದಿನಸಿ ತರೋದಾಗಿ ಹೇಳಿ ಹೋಗಿ, ವಾಪಸ್ ಬರುವಾಗ ಮದುವೆಯಾಗಿ ಬಂದಿದ್ದಾನೆ. ಉತ್ತರ ಪ್ರದೇಶದ ಘಾಜಿಯಾಬಾದ್​​ನ ಸಾಹಿಬಾಬಾದ್​ನಲ್ಲಿ ಈ ಘಟನೆ ವರದಿಯಾಗಿದೆ.

ಯುವಕನೊಬ್ಬ ತರಕಾರಿ ಮತ್ತು ದಿನಸಿ ತರುತ್ತೇನೆ ಅಂತ ತನ್ನ ತಾಯಿಯ ಬಳಿ ಹೇಳಿ ಹೊರಗೆ ಹೋಗಿದ್ದ. ಆದ್ರೆ ವಾಪಸ್ ಬರುವಾಗ ಯುವತಿಯೊಂದಿಗೆ ಮದುವೆಯಾಗಿ, ಮನೆಗೆ ಕರೆತಂದಿದ್ದಾನೆ. ಇದನ್ನು ಕಂಡ ತಾಯಿ ಆಶ್ಚರ್ಯಚಕಿತರಾಗಿದ್ದಾರೆ. ಅಲ್ಲದೆ ವಧು, ವರರನ್ನು ಮನೆಯೊಳಗೆ ಬಿಡಲು ನಿರಾಕರಿಸಿದ್ದಾರೆ. ಹೀಗಾಗಿ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಆದ್ರೆ ಪೊಲೀಸರು ಮನವೊಲಿಸಿದಾಗಲೂ ತಾಯಿ ನವಜೋಡಿಯನ್ನು ಮನೆಯೊಳಗೆ ಸೇರಿಸಿಕೊಳ್ಳಲು ಒಪ್ಪಲೇ ಇಲ್ಲ. ಲಾಕ್​ಡೌನ್ ನಿಯಮ ಉಲ್ಲಂಘಿಸಿ ಮದುವೆಯಾಗಿದ್ದಾನೆ. ಈತನನ್ನು ಮನೆಗೆ ಸೇರಿಸೋದಿಲ್ಲ ಎಂದು ತಾಯಿ ಕಿಡಿಕಾರಿದ್ದಾರೆ. ಕೊನೆಗೆ ಬೇರೆ ದಾರಿಯಿಲ್ಲದೇ ಪೊಲೀಸರು ಸದ್ಯ ಬಾಡಿಗೆ ಮನೆಯಲ್ಲಿರುವಂತೆ ಯುವಕನಿಗೆ ಸೂಚಿಸಿದ್ದಾರೆ.

-masthmagaa.com

Contact Us for Advertisement

Leave a Reply