masthmagaa.com:

ಕಲರ್​ಫುಲ್ ಟೂರ್ನಿ ಐಪಿಎಲ್​ಗೆ ದಿನಗಣನೆ ಆರಂಭವಾಗಿರುವ ನಡುವೆಯೇ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್​ಗೆ ಶಾಕ್ ಮೇಲೆ ಶಾಕ್ ಎದುರಾಗಿದೆ. ಒಂದ್ಕಡೆ ತಂಡದಲ್ಲಿ ಕೊರೋನಾ ಕಾಟವಾದ್ರೆ, ಮತ್ತೊಂದ್ಕಡೆ ಸುರೇಶ್​ ರೈನಾ ಭಾರತಕ್ಕೆ ಹಿಂದಿರುಗಿದ್ದಾರೆ. ಇದೀಗ ಆಫ್​ ಸ್ಪಿನ್ನರ್​ ಹರ್ಭಜನ್​ ಸಿಂಗ್ ವೈಯಕ್ತಿಕ ಕಾರಣಗಳಿಂದಾಗಿ ಈ ಬಾರಿಯ ಐಪಿಎಲ್​ನಿಂದ ಹೊರಗುಳಿಯಲು ನಿರ್ಧರಿಸಿದ್ಧಾರೆ.

ತಮ್ಮ ನಿರ್ಧಾರವನ್ನು ಚೆನ್ನೈ ಸೂಪರ್ ಕಿಂಗ್ಸ್​ ತಂಡಕ್ಕೆ ಈಗಾಗಲೇ ಅವರು ತಿಳಿಸಿದ್ದಾರೆ ಎನ್ನಲಾಗ್ತಿದೆ. ಈ ಬಾರಿಯ ಐಪಿಎಲ್​ನಿಂದ ಹೊರಗುಳಿಯಲು ನಿರ್ಧರಿಸಿದ ಸಿಎಸ್​ಕೆ ತಂಡದ ಎರಡನೇ ಆಟಗಾರ ಇವರಾಗಿದ್ದಾರೆ.

ಇದಕ್ಕೂ ಮೊದಲು ರೈನಾ ಅವರ ಸಂಬಂಧಿ ಮೇಲೆ ಭಾರತದಲ್ಲಿ ದಾಳಿ ನಡೆದ ಹಿನ್ನೆಲೆ ಯುಎಇನಲ್ಲಿದ್ದ ಸುರೇಶ್ ರೈನಾ ತವರಿಗೆ ವಾಪಸ್ ಬರಬೇಕಾಗಿತ್ತು. ಸದ್ಯ ಅವರು ಭಾರತದಲ್ಲೇ ಇದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ ಹರ್ಭಜನ್ ಸಿಂಗ್ ಕೂಡ ತಂಡದ ಸದಸ್ಯರ ಜೊತೆ ಯುಎಇಗೆ ಪ್ರಯಾಣ ಬೆಳೆಸದೇ ಭಾರತದಲ್ಲೇ ಉಳಿದಿದ್ದರು. ಹೀಗಾಗಿ ಸುರೇಶ್ ರೈನಾ ಮತ್ತು ಹರ್ಭಜನ್ ಸಿಂಗ್​ ಅವರ ಅನುಪಸ್ಥಿತಿ ಈ ಬಾರಿ ಧೋನಿ ತಂಡಕ್ಕೆ ಕಾಡಲಿದೆ.

-masthmagaa.com

Contact Us for Advertisement

Leave a Reply