ಕಂಗನಾ ರಾವಾವತ್ ವಿರುದ್ದ ನಾಲಗೆ ಹರಿಬಿಟ್ಟ ಕಾಂಗ್ರೆಸ್​ ನಾಯಕರು!

masthmagaa.com:

ಗಾಂಧೀಜಿ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದ ಬಾಲಿವುಡ್​ ನಟಿ, ಪದ್ಮಶ್ರೀ ಪುರಸ್ಕೃತೆ ಕಂಗನಾ ರನಾವತ್ ವಿರುದ್ಧ ಶಿವಸೇನೆ ಸಂಸದ ಕೃಪಾಲ್​ ತುಮಾನೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ಕಂಗನಾ ರನಾವತ್​ಗೆ ಏನ್ ಮಾಡಿ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದೆ ಅಂತ ಎಲ್ಲರಿಗೂ ಗೊತ್ತು. ಯಾರ ಕಾಲನ್ನ ನೆಕ್ಕಿ, ಇನ್ನೂ ಏನೇನೋ ನೆಕ್ಕಿ ಈ ಪ್ರಶಸ್ತಿ ಸಿಕ್ಕಿದೆ ಅಂತ ಸಂಸದರು, ಶಾಸಕರಿಗೆ ಗೊತ್ತು. ಗಾಂಧೀಜಿಗೆ ಅಧಿಕಾರದ ಆಸೆ ಇದ್ದಿದ್ರೆ ಅವರು ಆ ಕಾಲದಲ್ಲಿ ಪ್ರಧಾನಿನೂ ಆಗ್ತಿದ್ರು, ರಾಷ್ಟ್ರಪತಿನೂ ಆಗ್ತಿದ್ರು ಅಂತ ಹೇಳಿದ್ದಾರೆ. ಇನ್ನು ಕರ್ನಾಟಕ ವಿಧಾನಸಭೆ ಮಾಜಿ ಸ್ಪೀಕರ್​ ರಮೇಶ್ ಕುಮಾರ್ ಮಾತನಾಡಿ, ಹೊಟ್ಟೆ ಪಾಡಿಗಾಗಿ ಬಟ್ಟೆಬಿಚ್ಚಿ ಓಡಾಡೋರಿಗೇನು ಗೊತ್ತು ಗಾಂಧಿ ಮೌಲ್ಯ ಅಂತ ಕಂಗನಾ ವಿರುದ್ಧ ಕಿಡಿಕಾರಿದ್ದಾರೆ.

-masthmagaa.com

Contact Us for Advertisement

Leave a Reply