masthmagaa.com:
ಎಂಇಎಸ್ ಅಥವಾ ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನ ಬ್ಯಾನ್ ಮಾಡ್ಬೇಕು ಅಂತ ಆಗ್ರಹಿಸಿ ವಿವಿಧ ಕನ್ನಡಪರ ಸಂಘಟನೆಗಳು ಡಿಸೆಂಬರ್ 31ಕ್ಕೆ ಕರ್ನಾಟಕ ಬಂದ್ಗೆ ಕರೆ ಕೊಟ್ಟಿವೆ. ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು ಮತ್ತಿತರರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸುದ್ದಿಗೋಷ್ಠಿ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ಡಿಸೆಂಬರ್ 29ರೊಳಗೆ ಎಂಇಎಸ್ ಅನ್ನ ನಿಷೇಧಿಸಿದ್ರೆ ಬಂದ್ ನಿರ್ಧಾರವನ್ನ ವಾಪಸ್ ತಗೋತೀವಿ ಅಂತ ಹೇಳಿದ್ದಾರೆ. ಇನ್ನು ಕರ್ನಾಟಕ ಬಂದ್ ಕರೆಗೆ ವಿವಿಧ ಸಂಘಟನೆಗಳು ಬೆಂಬಲ ನೀಡಿದ್ರೆ, ಇನ್ನೂ ಕೆಲ ಸಂಘ ಸಂಸ್ಥೆಗಳು ನೈತಿಕ ಬೆಂಬಲ ನೀಡಿವೆ. ಬೀದಿಬದಿ ವ್ಯಾಪಾರಿಗಳ ಸಂಘಟನೆ ಬೆಂಬಲ ಕೊಟ್ಟಿದೆ. ಡಿಸೆಂಬರ್ 31ರ ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಓಲಾ, ಉಬರ್ ಸೇವೆ ಇರಲ್ಲ. ಏರ್ಪೋರ್ಟ್ ಟ್ಯಾಕ್ಸಿ ಸೇವೆ ಇರಲ್ಲ. ಆಟೋ ರಸ್ತೆಗಳಿಯೋದು ಕೂಡ ಅನುಮಾನ ಎನ್ನಲಾಗ್ತಿದೆ. ಇನ್ನು ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣ ಬಂದ್ಗೆ ಬೆಂಬಲ ಕೊಡಲ್ಲ ಅಂತ ಹೇಳಿದೆ. ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್ ಸಂಘದವರು ನೈತಿಕ ಬೆಂಬಲ ಕೊಡೋದಾಗಿ ಹೇಳಿದ್ದಾರೆ. ಹೀಗಾಗಿ ಅವು ಬಂದ್ ಆಗಲ್ಲ. ಖಾಸಗಿ ಮತ್ತು ಅನುದಾನರಹಿತ ಶಾಲೆಗಳ ಒಕ್ಕೂಟ ಕೂಡ ನೈತಿಕ ಬೆಂಬಲ ನೀಡೋದಾಗಿ ಹೇಳಿದೆ. ಇನ್ನು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್ ಮಾತನಾಡಿ, ಚಿತ್ರರಂಗ ಈಗಾಗಲೇ ಆರ್ಥಿಕ ಸಮಸ್ಯೆ ಎದುರಿಸುತ್ತಿದೆ. ಹೀಗಾಗಿ ಬಂದ್ಗೆ ಚಿತ್ರರಂಗ ಬೆಂಬಲ ಕೊಡೋ ಬಗ್ಗೆ ಸಭೆ ನಡೆಸಿ ತೀರ್ಮಾನ ತಗೋತೀವಿ ಎಂದಿದ್ದಾರೆ. ಸಾರಿಗೆ ನೌಕರರ ಒಕ್ಕೂಟ ಕೂಡ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದೆ.
ಕರ್ನಾಟಕ ಬಂದ್ ಬಗ್ಗೆ ಸರ್ಕಾರದಲ್ಲೇ ಭಿನ್ನಾಭಿಪ್ರಾಯವಿದ್ದಂತೆ ಕಾಣ್ತಿದೆ. ಕೆಲ ಸಚಿವರು ಬಂದ್ ಸರಿಯಲ್ಲ ಅಂದ್ರೆ, ಇನ್ನೂ ಕೆಲವರು ಬಂದ್ಗೆ ಸಪೋರ್ಟ್ ಮಾಡ್ಬೇಕು ಎಂದಿದ್ದಾರೆ. ಕಂದಾಯ ಸಚಿವ ಆರ್. ಅಶೋಕ್ ಮಾತನಾಡಿ, ಬಂದ್ಗೆ ಕರೆ ಕೊಡೋದ್ರಿಂದ ಜನರಿಗೆ ತೊಂದ್ರೆ ಆಗುತ್ತೆ, ಬಂದ್ನಿಂದ ಏನೂ ಸಾಧಿಸೋಕ್ಕಾಗಲ್ಲ. ಎಂಇಎಸ್ ಪುಂಡಾಟಿಕೆಯನ್ನ ಮಟ್ಟಹಾಕೋಕೆ ಕ್ರಮ ತಗೋತಿವಿ. ಕೊರೋನಾದಿಂದ ಜನ ಈಗಾಗಲೇ ಸಮಸ್ಯೆ ಅನುಭವಿಸಿದ್ದಾರೆ. ಮತ್ತೆ ಬಂದ್ ಬೇಡ ಅಂತ ಹೇಳಿದ್ದಾರೆ. ಇದಕ್ಕೆ ವಿರುದ್ಧ ಎಂಬಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿ, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿ ಎಲ್ಲಾ ರಾಜಕೀಯ ಪಕ್ಷಗಳು ಪಕ್ಷಬೇಧ ಮರೆತು ಬಂದ್ಗೆ ಸಪೋರ್ಟ್ ಮಾಡ್ಬೇಕು ಎಂದಿದ್ದಾರೆ. ಆದ್ರೆ ಬಂದ್ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ.
-masthmagaa.com
Contact Us for Advertisement