masthmagaa.com:
ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಸ್ಪೆಷಲ್ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಬೆಂಗಳೂರು ವಿಶೇಷ ನ್ಯಾಯಾಲಯ ಆದೇಶಿಸಿದೆ. 2006-07ರಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಡಿಸಿಎಂ ಆಗಿದ್ದಾಗ ಭೂ ಡಿನೋಟಿಫಿಕೇಶನ್ ಹಗರಣ ಸಂಬಂಧ ಈ ಕೇಸ್ ದಾಖಲಿಸುವಂತೆ ಸೂಚಿಸಲಾಗಿದೆ. ವಿಶೇಷ ಕೋರ್ಟ್ನ ಸೆಷನ್ಸ್ ಜಡ್ಜ್ ಬಿ ಜಯಂತ್ ಕುಮಾರ್, ವಸುದೇವ ರೆಡ್ಡಿ ಅನ್ನೋರ ಖಾಸಗಿ ದೂರಿನ ಮೇರೆಗೆ ಮಾರ್ಚ್ 26ರಂದು ಈ ತೀರ್ಪು ನೀಡಿದ್ದಾರೆ. ಅಂದಹಾಗೆ ಈ ವಿಶೇಷ ಕೋರ್ಟ್ನ್ನು ರಾಜ್ಯದ ಎಂಪಿ, ಎಂಎಲ್ಎಗಳ ವಿರುದ್ಧದ ಕ್ರಿಮಿನಲ್ ಕೇಸ್ಗಳ ವಿಚಾರಣೆಗೆ ಅಂತಲೇ ಸೆಟಪ್ ಮಾಡಲಾಗಿದೆ.
-masthmagaa.com
Contact Us for Advertisement