masthmagaa.com:
ರಾಜ್ಯದ ಕೊರೊನಾ ಪರಿಸ್ಥಿತಿ ಕುರಿತು ಸಿಎಂ ಬಿ.ಎಸ್.ಯಡಿಯೂರಪ್ಪ ಇವತ್ತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ಕೊಟ್ರು. ಈ ವೇಳೆ ರಾಜ್ಯದಲ್ಲಿ ಏಪ್ರಿಲ್ 24ರಿಂದ ಕೈಗೊಂಡ ಕಠಿಣ ಕ್ರಮಗಳಿಂದ ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಮೇ 5ರಂದು ರಾಜ್ಯದಲ್ಲಿ ಗರಿಷ್ಠ ಅಂದ್ರೆ 50,112 ಕೊರೋನಾ ಪ್ರಕರಣಗಳು ದಾಖಲಾಗಿದ್ವು. ಆದ್ರೆ ನಿನ್ನೆ ಆ ಸಂಖ್ಯೆ 39,900ಕ್ಕೆ ಇಳಿಕೆಯಾಗಿದೆ. ಅದೇ ರೀತಿ ಕೊರೋನಾ ಪ್ರಕರಣಗಳು ಹೆಚ್ಚಿದ್ದ ಬೆಂಗಳೂರು ಮತ್ತು ಕಲಬುರಗಿಯಲ್ಲೂ ಕೊರೋನಾ ಪ್ರಕರಣಗಳು ದಿನೇ ದಿನೇ ಕಡಿಮೆಯಾಗ್ತಿವೆ ಅಂತ ಹೇಳಿದ್ರು. ಇನ್ನು ರಾಜ್ಯದಲ್ಲಿ ಸದ್ಯಕ್ಕೆ 2ನೇ ಡೋಸ್ ಲಸಿಕೆಗೆ ಕಾಯುತ್ತಿರುವವರಿಗೆ ಆದ್ಯತೆ ನೀಡಲಾಗುತ್ತೆ. 18 ರಿಂದ 44 ವರ್ಷದ ಏಜ್ಗ್ರೂಪ್ಗೆ ಲಸಿಕೆ ಹಾಕೋದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈಗಾಗಲೇ ಕೋವಿಶೀಲ್ಡ್ನ 2 ಕೋಟಿ ಮತ್ತು ಕೋವ್ಯಾಕ್ಸಿನ್ನ 1 ಕೋಟಿ ಡೋಸ್ ಲಸಿಕೆಗೆ ಆರ್ಡರ್ ನೀಡಲಾಗಿದ್ದು, ಕೇಂದ್ರದಿಂದ ಈವರೆಗೆ 1.10 ಕೋಟಿ ಡೋಸ್ ಲಸಿಕೆ ಫ್ರೀಯಾಗೆ ಕೊಟ್ಟಿದೆ ಅಂದ್ರು. ಇನ್ನು ಅಕ್ಟೋಬರ್, ನವೆಂಬರ್ನಲ್ಲಿ 3ನೇ ಅಲೆ ಏಳೋ ಸಾಧ್ಯತೆ ಇರೋದ್ರಿಂದ ಡಾ.ದೇವಿಶೆಟ್ಟಿ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚಿಸಲಾಗುತ್ತೆ ಅಂತ ಕೂಡ ಮಾಹಿತಿ ನೀಡಿದ್ರು.
-masthmagaa.com
Contact Us for Advertisement