masthmagaa.com:
ಪಾಟ್ನಾ: ಬಿಹಾರದ ನೂತನ ಶಿಕ್ಷಣ ಸಚಿವ ಮೇವಲಾಲ್ ಚೌಧರಿ ರಾಷ್ಟ್ರ ಗೀತೆಯನ್ನ ಹಾಡಲು ತೊದಲುತ್ತಿರುವ ವಿಡಿಯೋವೊಂದು ನೆಟ್ಟಿಗರ ಟೀಕೆಗೆ ಗುರಿಯಾಗಿದೆ. ಪ್ರತಿಪಕ್ಷ ಆರ್ಜೆಡಿ ಶೇರ್ ಮಾಡಿರುವ ವಿಡಿಯೋದಲ್ಲಿ ಚೌಧರಿ ಅವರು, ಧ್ವಜಾರೋಹಣ ನಡೆಸಿ, ರಾಷ್ಟ್ರಗೀತೆಯ ಸಾಲುಗಳನ್ನು ತಪ್ಪುತಪ್ಪಾಗಿ ಹಾಡಿದ್ದಾರೆ. ʻಪಂಜಾಬ್ ಸಿಂಧ್ ಗುಜರಾತ ಮರಾಠ ಅಂತ ಹೇಳುವ ಬದಲು ಮೆವಾಲಾಲ್ ಚೌಧರಿ ಪಂಜಾಬ್ ವಸಂತ್ ಗುಜರಾತ ಮರಾಠʼ ಅಂತ ಹಾಡಿದ್ದಾರೆ.
ಸದ್ಯ ಈ ವಿಡಿಯೋ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ‘ಹಲವಾರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಆರೋಪ ಕೇಳಿ ಬಂದಿರುವ ಬಿಹಾರ ಶಿಕ್ಷಣ ಸಚಿವ ಮೇವಲಾಲ್ ಚೌಧರಿ ಅವರಿಗೆ ರಾಷ್ಟ್ರಗೀತೆ ಕೂಡ ಸರಿಯಾಗಿ ಬರುವುದಿಲ್ಲ. ನಿತೀಶ್ ಕುಮಾರ್ ಅವರೇ, ಇದಕ್ಕಿಂತ ಅವಮಾನ ಬೇರೆ ಯಾವುದಾದರೂ ಇದ್ಯಾ?ʼ ಅಂತ ಆರ್ಜೆಡಿ ಟ್ವೀಟ್ ಮಾಡಿದೆ. ಈ ವಿಡಿಯೋ ನೋಡಿದ ನೆಟ್ಟಿಗರು, ಶಿಕ್ಷಣ ಮಂತ್ರಿಯೇ ಈ ತಪ್ಪನ್ನ ಮಾಡಿದ್ರೆ ಇನ್ನು ಮಕ್ಕಳ ಕತೆ ಏನು ಅಂತ ಪ್ರಶ್ನೆ ಮಾಡಿದ್ದಾರೆ.
ಅಂದ್ಹಾಗೆ, ಭ್ರಷ್ಟಾಚಾರ ಆರೋಪ ಹೊತ್ತಿರುವ ಮೇವಲಾಲ್ ಅವರನ್ನ ಶಿಕ್ಷಣ ಮಂತ್ರಿಯಾಗಿ ನೇಮಕ ಮಾಡಿದ್ದಕ್ಕೆ ಪ್ರತಿಪಕ್ಷಗಳ ವಿರೋಧ ಮೊದಲಿನಿಂದಲೂ ಇತ್ತು. ಹೀಗಾಗಿ ವಿಪಕ್ಷಗಳು ಈಗಾಗಲೇ ಮೇವಲಾಲ್ ಅವರ ರಾಜೀನಾಮೆಗೂ ಆಗ್ರಹಿಸಿದ್ದವು.
भ्रष्टाचार के अनेक मामलों के आरोपी बिहार के शिक्षा मंत्री मेवालाल चौधरी को राष्ट्रगान भी नहीं आता।
नीतीश कुमार जी शर्म बची है क्या? अंतरात्मा कहाँ डुबा दी? pic.twitter.com/vHYZ8oRUVZ
— Rashtriya Janata Dal (@RJDforIndia) November 18, 2020
-masthmagaa.com
Contact Us for Advertisement