masthmagaa.com:

ಜಮ್ಮು-ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಡಿಡಿಸಿ ಚುನಾವಣೆ ಪ್ರಜಾಪ್ರಭುತ್ವದ ಗೆಲುವು ಅಂತ ಹೇಳಿದ ಪ್ರಧಾನಿ ಮೋದಿಗೆ ನ್ಯಾಷನಲ್​ ಕಾನ್ಫರೆನ್ಸ್​ನ ಓಮರ್ ಅಬ್ದುಲ್ಲಾ ತಿರುಗೇಟು ಕೊಟ್ಟಿದ್ದಾರೆ. ಡಿಡಿಸಿ ಚುನಾವಣೆಯಲ್ಲಿ ಗೆದ್ದಂತಹ ಅಭ್ಯರ್ಥಿಗಳ ಕುದುರೆ ವ್ಯಾಪಾರದಲ್ಲಿ ಬಿಜೆಪಿ ಮತ್ತು ಅದರ ಬಿ-ಟೀಂ ಅಪ್ನಿ ಪಾರ್ಟಿ ತೊಡಗಿದೆ ಅಂತ ಆರೋಪಿಸಿದ್ದಾರೆ. ‘ಪ್ರಧಾನ ಮಂತ್ರಿಗಳು ಪ್ರಜಾಪ್ರಭುತ್ವದ ಗೆಲುವು ಅಂತಿದ್ದಾರೆ. ಆದ್ರೆ ಶೋಪಿಯಾನ್​ನಲ್ಲಿ ಚುನಾವಣೆಗೆ ನಿಂತಿದ್ದ ನಮ್ಮ ಪಕ್ಷದವರಿಗೆ ಕಿರುಕುಳ ನೀಡಲಾಗ್ತಿದೆ. ಡಿಡಿಸಿ ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ನಮ್ಮ ಪಕ್ಷದ ಇಬ್ಬರು ಹಿರಿಯ ನಾಯಕರನ್ನ ವಶಕ್ಕೆ ಪಡೆಯಲಾಗಿದೆ. ಶೋಪಿಯಾನ್​ನಲ್ಲಿ ಗೆದ್ದಿರುವ ಓರ್ವ ಮಹಿಳೆಯನ್ನ ಬಲವಂತವಾಗಿ ಅಪ್ನಿ ಪಕ್ಷ ಸೇರುವಂತೆ ಮಾಡಿದ್ದಾರೆ. ಇದರ ಬಗ್ಗೆ ನಮ್ಮ ಬಳಿ ಸಾಕ್ಷ್ಯ ಇದೆ’ ಅಂತ ಓಮರ್ ಅಬ್ದುಲ್ಲಾ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply