masthmagaa.com:
ಜಮ್ಮು-ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಡಿಡಿಸಿ ಚುನಾವಣೆ ಪ್ರಜಾಪ್ರಭುತ್ವದ ಗೆಲುವು ಅಂತ ಹೇಳಿದ ಪ್ರಧಾನಿ ಮೋದಿಗೆ ನ್ಯಾಷನಲ್ ಕಾನ್ಫರೆನ್ಸ್ನ ಓಮರ್ ಅಬ್ದುಲ್ಲಾ ತಿರುಗೇಟು ಕೊಟ್ಟಿದ್ದಾರೆ. ಡಿಡಿಸಿ ಚುನಾವಣೆಯಲ್ಲಿ ಗೆದ್ದಂತಹ ಅಭ್ಯರ್ಥಿಗಳ ಕುದುರೆ ವ್ಯಾಪಾರದಲ್ಲಿ ಬಿಜೆಪಿ ಮತ್ತು ಅದರ ಬಿ-ಟೀಂ ಅಪ್ನಿ ಪಾರ್ಟಿ ತೊಡಗಿದೆ ಅಂತ ಆರೋಪಿಸಿದ್ದಾರೆ. ‘ಪ್ರಧಾನ ಮಂತ್ರಿಗಳು ಪ್ರಜಾಪ್ರಭುತ್ವದ ಗೆಲುವು ಅಂತಿದ್ದಾರೆ. ಆದ್ರೆ ಶೋಪಿಯಾನ್ನಲ್ಲಿ ಚುನಾವಣೆಗೆ ನಿಂತಿದ್ದ ನಮ್ಮ ಪಕ್ಷದವರಿಗೆ ಕಿರುಕುಳ ನೀಡಲಾಗ್ತಿದೆ. ಡಿಡಿಸಿ ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ನಮ್ಮ ಪಕ್ಷದ ಇಬ್ಬರು ಹಿರಿಯ ನಾಯಕರನ್ನ ವಶಕ್ಕೆ ಪಡೆಯಲಾಗಿದೆ. ಶೋಪಿಯಾನ್ನಲ್ಲಿ ಗೆದ್ದಿರುವ ಓರ್ವ ಮಹಿಳೆಯನ್ನ ಬಲವಂತವಾಗಿ ಅಪ್ನಿ ಪಕ್ಷ ಸೇರುವಂತೆ ಮಾಡಿದ್ದಾರೆ. ಇದರ ಬಗ್ಗೆ ನಮ್ಮ ಬಳಿ ಸಾಕ್ಷ್ಯ ಇದೆ’ ಅಂತ ಓಮರ್ ಅಬ್ದುಲ್ಲಾ ಹೇಳಿದ್ದಾರೆ.
-masthmagaa.com
Contact Us for Advertisement