masthmagaa.com:

ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ್​ನ ಹಲವೆಡೆ ಭಾರಿ ಹಿಮಪಾತವಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆಗಳು ಹಿಮದಿಂದ ಮುಚ್ಚಿ ಹೋಗಿವೆ. ಅದನ್ನ ತೆರವು ಮಾಡುವ ಕೆಲಸ ಭರದಿಂದ ಸಾಗಿದೆ. ಜೊತೆಗೆ ನಿರಂತರ ಹಿಮಪಾತದಿಂದಾಗಿ ಅಲ್ಲಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯ ಕೂಡ ಮುಂದುವರಿದಿದೆ. ಇದೆಲ್ಲದರ ನಡುವೆ ಉತ್ತಾರಖಂಡ್ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಕೇದಾರನಾಥ ದೇವಸ್ಥಾನಕ್ಕೆ ಹೋಗಿದ್ದಾರೆ. ಭಾರಿ ಹಿಮಪಾತದಿಂದಾಗಿ ಅವರಿಬ್ಬರೂ ಕೂಡ ಅಲ್ಲೇ ಸಿಲುಕಿದ್ದಾರೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply