masthmagaa.com:
‘ಕಿಡಿಗೇಡಿತನ ಮಾಡುವ ಮಮತಾ ಬ್ಯಾನರ್ಜಿ ಕಡೆಯವರೇ, 6 ತಿಂಗಳೊಳಗಾಗಿ ನಿಮ್ಮನ್ನ ನೀವು ಸರಿ ಮಾಡಿಕೊಳ್ಳಿ. ಇಲ್ಲದಿದ್ದರೆ ನಿಮ್ಮ ತಲೆ, ಕೈ, ಕಾಲು, ಪಕ್ಕೆಲುಬುಗಳು ಮುರಿದು ಹೋಗುತ್ತವೆ. ನೀವು ಮನೆಗೆ ಹೋಗುವ ಮೊದಲು ಆಸ್ಪತ್ರೆಗೆ ಹೋಗಬೇಕಾಗುತ್ತದೆ. ತಂಟೆಯನ್ನ ಮತ್ತಷ್ಟು ಜಾಸ್ತಿ ಮಾಡಿದ್ರೆ ನಿಮ್ಮನ್ನ ಸೀದಾ ಶವಾಗಾರಕ್ಕೆ ಕಳಿಸಲಾಗುತ್ತದೆ’ ಅಂತ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಡಿ.ಬಿ. ಘೋಷ್ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.
ಅಂದ್ಹಾಗೆ ಪಶ್ಚಿಮ ಬಂಗಾಳದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ. ಮಮತಾ ಬ್ಯಾನರ್ಜಿಯನ್ನ ಸಿಎಂ ಕುರ್ಚಿಯಿಂದ ಕೆಳಗಿಳಿಸಿ ಅಧಿಕಾರದ ಗದ್ದುಗೆ ಏರಲು ಬಿಜೆಪಿ ಇನ್ನಿಲ್ಲದ ಪ್ರಯತ್ನ ಮಾಡ್ತಿದೆ. ಇಂತಹ ಸಂದರ್ಭದಲ್ಲೇ ಬಿಜೆಪಿ ರಾಜ್ಯಾಧ್ಯಕ್ಷರು ಈ ರೀತಿ ಹೇಳಿಕೆ ಕೊಟ್ಟಿದ್ದಾರೆ.
-masthmagaa.com
Contact Us for Advertisement