masthmagaa.com:
ಉತ್ತರಪ್ರದೇಶ, ಮಧ್ಯಪ್ರದೇಶ, ಹೀಗೆ ಒಂದೊಂದೇ ರಾಜ್ಯದಲ್ಲಿ ಲವ್ ಜಿಹಾದ್ಗೆ ಕಡಿವಾಣ ಹಾಕುವ ಕಾನೂನು ಬರ್ತಿದೆಯಲಾ ಇದಕ್ಕೆ ಸಂಬಂಧಿಸಿದಂತೆ AIMIM ಪಕ್ಷದ ಮುಖ್ಯಸ್ಥ ಮತ್ತು ಸಂಸದ ಅಸಾದುದ್ದಿನ್ ಓವೈಸಿ ಮಾತನಾಡಿದ್ದಾರೆ. ಅವ್ರು ಏನ್ ಹೇಳಿದ್ದಾರೆ ಅಂದ್ರೆ, ‘ಭಾರತದ ಸಂವಿಧಾನದಲ್ಲಿ ಲವ್ ಜಿಹಾದ್ ಎಂಬ ಪದಕ್ಕೆ ವ್ಯಾಖ್ಯಾನನೇ ಇಲ್ಲ. ಆದ್ರೆ ಬಿಜೆಪಿ ಆಡಳಿತದ ರಾಜ್ಯಗಳು ಲವ್ ಜಿಹಾದ್ ಕಾನೂನುಗಳ ಮೂಲಕ ಸಂವಿಧಾನದ ಅಪಹಾಸ್ಯ ಮಾಡಿವೆ. ಒಬ್ಬ ವ್ಯಕ್ತಿಯ ವೈಯಕ್ತಿಕ ಬದುಕಿನಲ್ಲಿ ಹಸ್ತಕ್ಷೇಪ ಮಾಡಲು ಯಾವ ಸರ್ಕಾರಕ್ಕೂ ಅಧಿಕಾರವಿಲ್ಲ. ಆದ್ರೆ ಬಿಜೆಪಿಯವರು ಸಂವಿಧಾನದ ಮೂಲಭೂತ ಹಕ್ಕುಗಳನ್ನ ಉಲ್ಲಂಘಿಸಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯಗಳು ಮೊದಲು ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (MSP) ನೀಡುವ ಮತ್ತು ಉದ್ಯೋಗಗಳನ್ನ ನೀಡುವ ಕಾನೂನು ಜಾರಿಗೆ ತರಲಿ’ ಅಂತ ಓವೈಸಿ ಕಿಡಿಕಾರಿದ್ದಾರೆ.
-masthmagaa.com
Contact Us for Advertisement