masthmagaa.com:
ಯುವತಿ ಕೈಯಲ್ಲಿ ತ್ರಿಶೂಲ, ಸಿಗರೆಟ್, ಎಣ್ಣೆ ಬಾಟಲ್ ಕೊಟ್ಟು ಫೋಟೋಶೂಟ್ ಮಾಡಿದ್ದ ಛಾಯಾಗ್ರಾಹಕಿ ದಿಯಾ ಜಾನ್ ವಿರುದ್ಧ ಕೇರಳದ ಮಾರಾಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈಕೆಯ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಅಡಿಯಲ್ಲಿ ಕೊಚ್ಚಿ ಮೂಲದ ಮುಕ್ಕೋಟಿ ಭಗವತಿ ದೇವಸ್ಥಾನ ದೂರು ಕೊಟ್ಟಿದೆ. ಸದ್ಯ ವಿವಾದಕ್ಕೆ ಕಾರಣವಾಗಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಿಂದ ಡಿಲಿಟ್ ಮಾಡಲಾಗಿದೆ. ಜೊತೆಗೆ ಛಾಯಾಗ್ರಾಹಕಿ ದಿಯಾ ಜಾನ್ ಕೂಡ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಕ್ಷಮೆ ಕೇಳಿದ್ದಾರೆ. ಅಂದ್ಹಾಗೆ ಮಹಿಳಾ ಸ್ವಾತಂತ್ರ್ಯದ ಥೀಮ್ಗಾಗಿ ಈ ರೀತಿಯ ಪೋಸ್ಗಳನ್ನ ಕೊಡಿಸಿ ದಿಯಾ ಜಾನ್ ಮತ್ತು ತಂಡ ಫೋಟೋಶೂಟ್ ಮಾಡಿತ್ತು.
-masthmagaa.com
Contact Us for Advertisement