masthmagaa.com:
ಮುಂಬೈ: ಮಹಾರಾಷ್ಟ್ರದಲ್ಲಿ ಕಾನೂನು ಸುವ್ಯವಸ್ಥೆ ಎತ್ತ ಸಾಗ್ತಿದೆ ಅನ್ನೋದು ಗೊತ್ತಾಗ್ತಿಲ್ಲ. ಮಹಾರಾಷ್ಟ್ರದಲ್ಲಿ ಕೋಟ್ಯಾಧಿಪತಿಗಳಿಗೆ ಲಾಕ್ಡೌನ್ ಸಮಯದಲ್ಲಿ ಪಿಕ್ನಿಕ್ ಹೋಗಲು ಅವಕಾಶ ಮಾಡಿಕೊಟ್ಟ ಪೊಲೀಸ್ ಅಧಿಕಾರಿಯನ್ನು ಈಗ ಪುಣೆಯ ಗರ ಪೊಲೀಸ್ ಮುಖ್ಯಸ್ಥನನ್ನಾಗಿ ನೇಮಿಸಲಾಗಿದೆ.
1992ನೇ ಕೇಡರ್ನ ಐಪಿಎಸ್ ಅಧಿಕಾರಿ ಅಮಿತಾಬ್ ಗುಪ್ತಾ, ಶ್ರೀಮಂತ ಸಹೋದರರಾದ ಕಪಿಲ್ ಮತ್ತು ಧೀರಜ್ಗೆ ಮುಂಬೈನಿಂದ ಮಹಾಬಲೇಶ್ವರಕ್ಕೆ ತೆರಳಲು ಅವಕಾಶ ಮಾಡಿಕೊಟ್ಟಿದ್ದರು. ಆಗ ದೇಶದಲ್ಲಿ ಕೊರೊನಾ ಲಾಕ್ಡೌನ್ ಇದ್ದಿದ್ದರಿಂದ ಸ್ವತಃ ಒಂದು ಲೆಟರ್ ಬರೆದುಕೊಟ್ಟಿದ್ದ ಅವರು, ಪ್ರವಾಸ ಹೊರಟಿರೋ ಈ ಗ್ರೂಪ್ ನನಗೆ ತುಂಬಾ ಬೇಕಾದವರು. ನನ್ನ ಫ್ಯಾಮಿಲಿ ಫ್ರೆಂಡ್ಸ್.. ಅವರು ಅನಿವಾರ್ಯ ಕಾರಣಗಳಿಂದ ಖಂಡಾಲದಿಂದ ಮಹಾಬಲೇಶ್ವರಕ್ಕೆ ಪ್ರಯಾಣ ಬೆಳೆಸುತ್ತಿದ್ದಾರೆ ಎಂದು ತಿಳಿಸಿದ್ದರು. ಅಲ್ಲದೆ ಪ್ರಯಾಣ ಮಾಡುತ್ತಿದ್ದವರ ಹೆಸರು ಕೂಡ ಬರೆದಿದ್ದರು.
ಇದು ಬಹಿರಂಗವಾಗುತ್ತಿದ್ದರಂತೆ ಅಮಿತಾಬ್ ಗುಪ್ತಾರನ್ನು ಕಡ್ಡಾಯ ರಜೆಯ ಮೇಲೆಗೆ ಕಳುಹಿಸಲಾಗಿತ್ತು. ಆದ್ರೆ ನಂತರದಲ್ಲಿ ಪೊಲೀಸ್ ಇಲಾಖೆಯ ವಿಚಾರಣೆಗೆ ಹಾಜರಾಗಿದ್ದ ಅವರು, ಮೇ ತಿಂಗಳಲ್ಲಿ ಕೆಲಸಕ್ಕೆ ಮರಳಿದ್ದರು. ಈಗ ಅವರನ್ನು ಪುಣೆ ನಗರ ಪೊಲೀಸ್ ಆಯುಕ್ತರನ್ನಾಗಿ ನೇಮಿಸಲಾಗಿದೆ.
-masthmagaa.com
Contact Us for Advertisement