ಉದ್ಧವ್ ಠಾಕ್ರೆ.. ನೀನು ಏನ್ ಅನ್ಕೊಂಡಿದಿಯಾ..?- ಕಂಗನಾ ಕೆಂಡ

masthmagaa.com:

ಮಹಾರಾಷ್ಟ್ರ: ಕಂಗನಾ ರನಾವತ್ ಮತ್ತು ಶಿವಸೇನೆ ನಡುವಿನ ಹಗ್ಗಜಗ್ಗಾಟ ಮುಂದುವರಿದಿದೆ. ಕಂಗನಾ ಕಚೇರಿಯಲ್ಲಿ ಅಕ್ರಮವಾಗಿ ಮಾರ್ಪಾಡು ಮಾಡಲಾಗಿದ್ದ ಜಾಗವನ್ನು ಬಿಎಂಸಿ ಅಧಿಕಾರಿಗಳು ಧ್ವಂಸಗೊಳಿಸಿದ್ರು. ಇದ್ರ ಬೆನ್ನಲ್ಲೇ ಖಾರವಾಗಿ ಪ್ರತಿಕ್ರಿಯಿಸಿರುವ ಕಂಗನಾ ರನಾವತ್, ಉದ್ಧವ್ ಠಾಕ್ರೆಯ ಬಗ್ಗೆ ಏಕವಚನ ಪ್ರಯೋಗಿಸಿ, ವಾಗ್ಧಾಳಿ ನಡೆಸಿದ್ದಾರೆ. ವಿಡಿಯೋವೊಂದನ್ನು ಬಿಡುಗಡೆ ಮಾಡಿರೋ ಅವರು, ಉದ್ಧವ್ ಠಾಕ್ರೆ.. ನೀನು ಏನ್ ಅನ್ಕೊಂಡಿದಿಯಾ..? ಸಿನಿಮಾ ಮಾಫಿಯಾ ಜೊತೆ ಸೇರಿಕೊಂಡು ನನ್ನ ಮನೆಯನ್ನು ಧ್ವಂಸಗೊಳಿಸಿ, ಸೇಡು ತೀರಿಸಿಕೊಳ್ತಿದ್ದೀಯಾ..? ಇಂದು ನನ್ನ ಮನೆಯನ್ನು ಧ್ವಂಸಗೊಳಿಸಲಾಗಿದೆ. ನಾಳೆ ನಿನ್ನ ಅಹಂಕಾರ ಕುಸಿಯಲಿದೆ ಅಂತ ಕಿಡಿಕಾರಿದ್ದಾರೆ.

ಇದು ಕಾಲಚಕ್ರ.. ನೆನಪಿಟ್ಟುಕೋ.. ಇದು ಸದಾ ಹೀಗೇ ಇರೋದಿಲ್ಲ. ಕಾಶ್ಮೀರ ಪಂಡಿತರು ಏನೆಲ್ಲಾ ಹಿಂಸೆ ಅನುಭವಿಸಿದ್ರು ಅನ್ನೋದು ನನಗೆ ಇಂದು ಅರ್ಥವಾಗಿದೆ. ನಾನು ಕೇವಲ ಅಯೋಧ್ಯೆ ಬಗ್ಗೆ ಮಾತ್ರವಲ್ಲ.. ಕಾಶ್ಮೀರ ಬಗ್ಗೆಯೂ ಸಿನಿಮಾ ಮಾಡ್ತೀನಿ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply