masthmagaa.com:
ಲಡಾಖ್ ಪೂರ್ವ ಭಾಗದ ಗಾಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಸೈನಿಕರ ನಡುವೆ ಸಂಘರ್ಷ ನಡೆದ ಬೆನ್ನಲ್ಲೇ ಇತ್ತೀಚೆಗೆ ಲಡಾಖ್ಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಯೋಧರ ಆತ್ಮಬಲ, ಉತ್ಸಾಹ ಹೆಚ್ಚಿಸಿ ಬಂದಿದ್ರು. ಇದೀಗ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಲಡಾಖ್ನ ಲೇಹ್ಗೆ ಭೇಟಿ ನೀಡಿದ್ದಾರೆ. ರಾಜ್ನಾಥ್ ಸಿಂಗ್ಗೆ ಸಿಡಿಎಸ್ ಬಿಪಿನ್ ರಾವತ್ ಮತ್ತು ಭೂಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಸಾಥ್ ನೀಡಿದ್ರು.
ಮೊದಲಿಗೆ ಲೇಹ್ ಏರ್ಪೋರ್ಟ್ಗೆ ಬಂದಿಳಿದ ರಾಜ್ನಾಥ್ ಸಿಂಗ್ ಅಲ್ಲಿಂದ ಸ್ಟಕ್ನಾಗೆ ತೆರಳಿ ಶಸಸ್ತ್ರ ಪಡೆಯ ಪ್ಯಾರಾ ಡ್ರಾಪಿಂಗ್ ಕೌಶಲ್ಯವನ್ನು ವೀಕ್ಷಿಸಿದರು. ಯೋಧರು ಪ್ಯಾರಾಚೂಟ್ಗಳ ಮೂಲಕ ಲ್ಯಾಂಡ್ ಆಗೋದನ್ನು ಕಣ್ತುಂಬಿಕೊಂಡ್ರು. ಇದೇ ವೇಳೆ ಭಾರತೀಯ ಸೇನೆಯ ಟಿ-90 ಟ್ಯಾಂಕ್ ಮತ್ತು ಬಿಎಂಪಿ ಕಾಲಾಳುಪಡೆಯ ಯುದ್ಧ ವಾಹನಗಳು ಅಭ್ಯಾಸ ನಡೆಸಿದವು.
ಇದನ್ನೂ ಓದಿ: ಬೆಂಗಳೂರಲ್ಲಿ ಒಂದು ವಾರ ಮಾತ್ರ ಲಾಕ್ಡೌನ್.. ವದಂತಿಗೆ ತೆರೆ ಎಳೆದ ಸರ್ಕಾರ
ಬಳಿಕ ಯೋಧರನ್ನು ಉದ್ದೇಶಿಸಿ ಮಾತನಾಡಿದ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್, ‘ಇತ್ತೀಚೆಗೆ ನಡೆದ ಭಾರತ ಮತ್ತು ಚೀನಾ ಸೈನಿಕರ ಘರ್ಷಣೆಯಲ್ಲಿ ನಮ್ಮ ಗಡಿಯನ್ನು ಕಾಯುತ್ತಿದ್ದ 20 ಯೋಧರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ನಮ್ಮ ಯೋಧರ ನಷ್ಟದ ಬಗ್ಗೆ ದುಃಖವಿದೆ. ನಾನು ಅವರಿಗೆ ಗೌರವ ಸಲ್ಲಿಸುತ್ತೇನೆ. ಗಡಿ ವಿವಾದವನ್ನು ಬಗೆಹರಿಸಲು ಮಾತುಕತೆ ನಡೆಯುತ್ತಿದೆ. ಆದರೆ ಅದನ್ನು ಎಷ್ಟರ ಮಟ್ಟಿಗೆ ಬಗೆಹರಿಸಬಹುದು ಅಂತ ನಾನು ಖಾತರಿಪಡಿಸುವುದಿಲ್ಲ. ನಾನು ನಿಮಗೆ ಭರವಸೆ ನೀಡುತ್ತೇನೆ, ನಮ್ಮ ನೆಲದ ಒಂದು ಇಂಚು ಸಹ ಜಗತ್ತಿನ ಯಾವುದೇ ದೇಶ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಮಾತುಕತೆ ಮೂಲಕ ಪರಿಹಾರ ಕಂಡುಹಿಡಿದರೆ ಉತ್ತಮ’ ಎಂದಿದ್ದಾರೆ.
#WATCH – Talks are underway to resolve the border dispute (between India & China) but to what extent it can be resolved, I cannot guarantee: Defence Minister Rajnath Singh at Lukung, Ladakh pic.twitter.com/U5r7qwRSaG
— ANI (@ANI) July 17, 2020
ನಂತರ ಪ್ಯಾಂಗಾಂಗ್ ಲೇಕ್ ಸಮೀಪದ ಲುಕುಂಗ್ ಪೋಸ್ಟ್ಗೂ ಭೇಟಿ ನೀಡಿದ ರಕ್ಷಣಾ ಸಚಿವರು ಭಾರತೀಯ ಸೇನೆ ಮತ್ತು ಐಟಿಬಿಪಿ ಸಿಬ್ಬಂದಿ ಜೊತೆ ಮಾತುಕತೆ ನಡೆಸಿದ್ರು. ಈ ವೇಳೆ ಯೋಧರಿಗೆ ಸಿಹಿ ಹಂಚಿದ್ರು. ಅಂದ್ಹಾಗೆ ಪ್ಯಾಂಗಾಂಗ್ ಲೇಕ್ನ ಉತ್ತರ-ಪಶ್ಚಿಮ ಭಾಗದಲ್ಲಿರೋ ಲುಕುಂಗ್ ಪೋಸ್ಟ್ ಫಿಂಗರ್ ಏರಿಯಾ-4ರಿಂದ 43 ಕಿಲೋ ಮೀಟರ್ ದೂರದಲ್ಲಿದೆ. ಫಿಂಗರ್ ಏರಿಯಾ-4ರಲ್ಲಿ ಭಾರತ ಮತ್ತು ಚೀನಾ ಸೇನೆಗಳು ಸದ್ಯ ಸೇನಾ ಹಿಂಪಡೆಯುವಿಕೆ ಕಾರ್ಯದಲ್ಲಿ ತೊಡಗಿವೆ.
-masthmagaa.com
Contact Us for Advertisement