masthmagaa.com:
ಬೆಂಗಳೂರು: ರಾಜ್ಯದಲ್ಲಿ ಗೋಮಾಂಸ ನಿಷೇಧಿಸಿರೋದು ನಿಮಗೆ ಗೊತ್ತಿದೆ. ಆದ್ರೆ ನೆರೆರಾಜ್ಯ ಗೋವಾಗೆ ರಾಜ್ಯದಿಂದಲೇ ಭಾರಿ ಪ್ರಮಾಣದಲ್ಲಿ ಗೋಮಾಂಸ ರಫ್ತು ಮಾಡಲಾಗುತ್ತಿತ್ತು. ಆದ್ರೀಗ ಗೋಮಾಂಸ ನಿಷೇಧ ಹಿನ್ನೆಲೆ ನಮ್ಮ ರಾಜ್ಯದಿಂದ ಗೋವಾಗೆ ಮಾಂಸ ಹೋಗ್ತಿಲ್ಲ. ಹೀಗಾಗಿ ಗೋವಾದಲ್ಲಿ ಮಾಂಸದ ಕೊರತೆ ಎದುರಾಗಿದೆ. ಹೀಗಾಗಿ ಬೇರೆ ರಾಜ್ಯಗಳಿಂದ ಗೋವುಗಳನ್ನು ತರಿಸಿ, ವಧೆ ಮಾಡಲು ಸಿಎಂ ಪ್ರಮೋದ್ ಸಾವಂತ್ ಅನುಮತಿ ನೀಡಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಂಸಕ್ಕಾಗಿ ಗೋವುಗಳನ್ನು ಪೂರೈಕೆ ಮಾಡುವ ಏಜೆಂಟರುಗಳು ಬೇಡಿಕೆಗೆ ತಕ್ಕಷ್ಟು ಗೋವುಗಳನ್ನು ತಂದು ವಧಿಸಲು ಸಾಧ್ಯವಾಗದೇ ಇದ್ದರೆ, ನೆರೆರಾಜ್ಯಗಳಿಂದ ಗೋವುಗಳನ್ನು ಖರೀದಿಸಬಹುದು. ಅವುಗಳನ್ನು ಗೋವಾ ಮೀಟ್ ಕಾಂಪ್ಲೆಕ್ಸ್ ಲಿ.ನಲ್ಲಿ ವಧೆ ಮಾಡಬಹುದು ಅಂತ ಹೇಳಿದ್ದಾರೆ.
masthmagaa.com:
Contact Us for Advertisement