masthmagaa.com:

‘ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕಳಪೆ ಪ್ರದರ್ಶನ ಮತ್ತು ವಿವಿಧ ರಾಜ್ಯಗಳಲ್ಲಿ ನಡೆದ ಉಪಚುನಾವಣೆಯಲ್ಲಾದ ಸೋಲನ್ನು ನೋಡಿದ್ರೆ ಕಾಂಗ್ರೆಸ್ ಪಕ್ಷವು ಬೇರೆ ಪಕ್ಷಗಳಿಗೆ ಪರ್ಯಾಯ ಅಲ್ಲ ಅನ್ನೋದು ದೇಶದ ಜನರಿಗೆ ಗೊತ್ತಾಗಿದೆ’ ಅಂತ ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೇಂದ್ರದ ಮಾಜಿ ಸಚಿವ ಕಪಿಲ್ ಸಿಬಲ್ ಹೇಳಿದ್ದಾರೆ. ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಪಕ್ಷದ ನಾಯಕತ್ವ ಬಗ್ಗೆ ಮತ್ತೊಮ್ಮೆ ಅಸಮಾಧಾನ ಹೊರಹಾಕಿದ್ದಾರೆ.

‘ಕಾಂಗ್ರೆಸ್ ಪಕ್ಷದಲ್ಲಿನ ಸಮಸ್ಯೆ ಮತ್ತು ಅವುಗಳಿಗೆ ಉತ್ತರ ಏನು ಅನ್ನೋದು ಪಕ್ಷದ ನಾಯಕತ್ವಕ್ಕೆ ಗೊತ್ತಿದೆ. ಆದ್ರೆ ಅದನ್ನ ಬಗೆಹರಿಸುತ್ತಿಲ್ಲ. ಕೆಲ ದಿನಗಳ ಹಿಂದೆ ನಮ್ಮಲ್ಲಿ ಕೆಲವರು ಹೈಕಮಾಂಡ್​ಗೆ ಪತ್ರ ಬರೆದು ಪಕ್ಷದಲ್ಲಿ ಏನೆಲ್ಲಾ ಬದಲಾವಣೆಗಳನ್ನ ಮಾಡಬಹುದು ಅನ್ನೋದನ್ನ ಹೇಳಿದ್ವಿ. ಆದ್ರೆ ಅವರು ನಮ್ಮ ಮಾತುಗಳನ್ನ ಆಲಿಸುವ ಬದಲು ಬೆನ್ನು ತೋರಿಸಿದ್ರು. ಅದರ ಪರಿಣಾಮ ಏನು ಅನ್ನೋದು ಈಗ ನಮ್ಮೆಲ್ಲರ ಮುಂದಿದೆ’ ಅಂತ ಸಿಬಲ್ ಹೇಳಿದ್ದಾರೆ. ಅಂದ್ಹಾಗೆ ಇತ್ತೀಚೆಗೆ ಕಪಿಲ್ ಸಿಬಲ್, ಗುಲಾಂ ನಬಿ ಆಜಾದ್​ ಸೇರಿದಂತೆ ಕಾಂಗ್ರೆಸ್​ನ​ 23 ಹಿರಿಯ ನಾಯಕರು ಸೋನಿಯಾ ಗಾಂಧಿಗೆ ಪತ್ರ ಬರೆದು ಫುಲ್​ ಟೈಂ, ಪರಿಣಾಮಕಾರಿ ನಾಯಕತ್ವಕ್ಕಾಗಿ ಮತ್ತು ಪಕ್ಷದಲ್ಲಿ ಕೆಲವವೊಂದು ಸುಧಾರಣೆಗಾಗಿ ಬೇಡಿಕೆ ಇಟ್ಟಿದ್ದರು.

-masthmagaa.com

Contact Us for Advertisement

Leave a Reply