ಸಾಲ ತೀರಿಸಲು ಬಿಜೆಪಿಗೆ ಬಂದ್ರಾ ರಮೇಶ್ ಜಾರಕಿಹೊಳಿ..? ಸತೀಶ್ ಕೆಂಡ

ಬೆಳಗಾವಿ: ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಸಹೋದರ ಸತೀಶ್ ಜಾರಕಿಹೊಳಿ ವಾಗ್ದಾಳಿ ಮುಂದುವರಿಸಿದ್ದಾರೆ. ಬೆಳಗಾವಿ ಗೋಕಾಕ್​ನಲ್ಲಿ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದಾರೆ. ಅದು ತೀರಿಸಲು ಸಾಧ್ಯವಾಗದೇ ಕೊನೆಗೆ ಬಿಜೆಪಿಗೆ ಸೇರಿದ್ದಾರೆ. ಏನ್ ಪಕ್ಷ ಕಟ್ಟಿ ಉದ್ದಾರ ಮಾಡೋಕೆ ಬಿಜೆಪಿಗೆ ಹೋಗಿಲ್ಲ. ಕೇವಲ ಸಾಲ ತೀರಿಸುವ ಉದ್ದೇಶದಿಂದ ಬಿಜೆಪಿಗೆ ಹೋಗಿದ್ದಾರೆ. ಪಾಪ ಯಡಿಯೂರಪ್ಪ ಮತ್ತು ಬಿಜೆಪಿಯವರಿಗೆ ರಮೇಶ್ ಜಾರಕಿಹೊಳಿ ಅಸಲಿಯತ್ತು ಗೊತ್ತಿಲ್ಲದೆ ನಂಬಿದ್ದಾರೆ. ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ಕೊಟ್ಟಿದ್ದಾರೆ. ರಮೇಶ್ ಜಾರಕಿಹೊಳಿ ಈವರೆಗೆ ಗೆದ್ದಿದ್ದು ಸ್ವಂತ ಬಲದಿಂದ ಅಲ್ಲ. ಜಾರಕಿಹೊಳಿ ಬ್ರ್ಯಾಂಡ್ ಮತ್ತು ಲಖನ್ ಜಾರಕಿಹೊಳಿ ಬೆಂಬಲದಿಂದ ಗೆಲ್ಲುತ್ತಾ ಬಂದಿದ್ದಾರೆ ಅಷ್ಟೆ ಅಂತ ಕೆಂಡಕಾರಿದ್ರು. ಅಲ್ಲದೆ ಸರ್ಕಾರ ಕೆಡವಿ ಬಂದ ರಮೇಶ್​​​ಗೆ ನಾವು ಉಪಚುನಾವಣೆಯಲ್ಲಿ ಕೆಡವಿ ಬುದ್ಧಿ ಕಲಿಸೋಣ ಅಂದ್ರು

 

Contact Us for Advertisement

Leave a Reply