masthmagaa.om:
‘ಅಖಂಡ ಭಾರತದ ಪರಿಕಲ್ಪನೆಯಲ್ಲಿ ನಮಗೆ ನಂಬಿಕೆ ಇದೆ. ಮುಂದೊಂದು ದಿನ ಪಾಕಿಸ್ತಾನದ ಕರಾಚಿ ಕೂಡ ಭಾರತದ ಭಾಗವಾಗಲಿದೆ’ ಅಂತ ಮಹಾರಾಷ್ಟ್ರ ಮಾಜಿ ಸಿಎಂ ಮತ್ತು ಬಿಜೆಪಿ ನಾಯಕ ದೇವೇಂದ್ರ ಫಡ್ನಾವಿಸ್ ಹೇಳಿದ್ದಾರೆ. ಕರಾಚಿ ಸ್ವೀಟ್ಸ್, ಕರಾಚಿ ಬೇಕರಿಗಳ ಹೆಸರನ್ನ ಬದಲಾಯಿಸಬೇಉ ಎಂಬ ಮಾತುಗಳು ಕೇಳಿ ಬರುತ್ತಿವೆ. ಇತ್ತೀಚೆಗೆ ಶಿವಸೇನೆ ನಾಯಕನೊಬ್ಬ ಮುಂಬೈನಲ್ಲಿರುವ ‘ಕರಾಚಿ ಸ್ವೀಟ್ಸ್’ ಅಂಗಡಿ ಮಾಲೀಕನಿಗೆ ಹೆಸರು ಬದಲಿಸುವಂತೆ ಎಚ್ಚರಿಕೆ ಕೊಟ್ಟ ವಿಡಿಯೋ ಕೂಡ ವೈರಲ್ ಆಗಿತ್ತು. ಇದರ ನಡುವೆಯೇ ದೇವೇಂದ್ರ ಫಡ್ನಾವಿಸ್ ಈ ರೀತಿ ಹೇಳಿದ್ದಾರೆ. ಫಡ್ನಾವಿಸ್ ಅವರ ಈ ಹೇಳಿಕೆ ಪಾಕಿಸ್ತಾನದಲ್ಲಿ ಕೋಲಾಹಲ ಎಬ್ಬಿಸೋದಂತೂ ಗ್ಯಾರಂಟಿ.
ಮತ್ತೊಂದುಕಡೆ ದೇವೇಂದ್ರ ಫಡ್ನಾವಿಸ್ ಹೇಳಿಕೆಗೆ ತಿರುಗೇಟು ಕೊಟ್ಟಿರುವ ಶಿವಸೇನೆ ಸಂಸದ ಸಂಜಯ್ ರಾವತ್, ‘ಮೊದಲು ಪಾಕಿಸ್ತಾನ ಆಕ್ರಮಿಸಿಕೊಂಡಿರುವ ಕಾಶ್ಮೀರವನ್ನು ತನ್ನಿ. ಆಮೇಲೆ ಕರಾಚಿ ಬಗ್ಗೆ ನೋಡೋಣ’ ಅಂತ ಹೇಳಿದ್ದಾರೆ.
-masthmagaa.com
Contact Us for Advertisement