masthmagaa.com:
ರಾಜ್ಯದಲ್ಲಿ ಮೂವರು ಉಪಮುಖ್ಯಮಂತ್ರಿಗಳಿದ್ದರೂ ಡಿಸಿಎಂ ಹುದ್ದೆಗೆ ರೇಸ್ ಮಾತ್ರ ನಿಲ್ಲುವಂತೆ ಕಾಣುತ್ತಿಲ್ಲ. ಇದೀಗ ಆರೋಗ್ಯ ಸಚಿವ ಶ್ರೀರಾಮುಲು ‘ನನ್ನನ್ನು ಡಿಸಿಎಂ ಮಾಡಲೇಬೇಕು’ ಅಂತ ಗಡೇ ದೇವಿಗೆ ಪತ್ರ ಬರೆದಿದ್ದಾರೆ. ಈ ವಿಚಾರವೀಗ ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಯಾದಗಿರಿ ಜಿಲ್ಲೆಯ ಗಡೇ ದುರ್ಗಾದೇವಿಯ ದೇವಾಲಯಕ್ಕೆ ನಿನ್ನೆ ಭೇಟಿ ನೀಡಿದ ರಾಮುಲು ದೇವಿ ಮುಂದೆ ಡಿಸಿಎಂ ಹುದ್ದೆಯ ಬೇಡಿಕೆ ಇಟ್ಟಿದ್ದಾರೆ. ಮೂರು ಸಾಲಿನ ಪತ್ರದಲ್ಲಿ ಇಂಗ್ಲಿಷ್ ಅಕ್ಷರಗಳಲ್ಲಿ ದೇವಿ ಬಳಿ ಬೇಡಿಕೊಂಡಿರುವ ರಾಮುಲು ‘Sriramulu Deputy Chief Minister of Karnataka Must Compulsory’ ಅಂತ ಬರೆದಿದ್ದಾರೆ. ಇದರಲ್ಲಿ ವ್ಯಾಕರಣ ತಪ್ಪಿದ್ದರೂ ‘ಶ್ರೀರಾಮುಲು ಆದ ನನ್ನನ್ನ ಕರ್ನಾಟಕದ ಉಪ ಮುಖ್ಯಮಂತ್ರಿಯನ್ನಾಗಿ ಮಾಡಲೇಬೇಕು’ ಅಂತ ಕೇಳಿಕೊಂಡಿದ್ದಾರೆ. ಈ ಪತ್ರವನ್ನು ಬರೆದಿದ್ದು ತಾನೇ ಅಂತಾನೂ ಸಚಿವರು ಒಪ್ಪಿಕೊಂಡಿದ್ದಾರೆ.
-masthmagaa.com
Contact Us for Advertisement