ತನ್ನನ್ನು ಡಿಸಿಎಂ ಮಾಡುವಂತೆ ದೇವರಿಗೇ ಪತ್ರ ಬರೆದ ಶ್ರೀರಾಮುಲು..!

masthmagaa.com:

ರಾಜ್ಯದಲ್ಲಿ ಮೂವರು ಉಪಮುಖ್ಯಮಂತ್ರಿಗಳಿದ್ದರೂ ಡಿಸಿಎಂ ಹುದ್ದೆಗೆ ರೇಸ್​ ಮಾತ್ರ ನಿಲ್ಲುವಂತೆ ಕಾಣುತ್ತಿಲ್ಲ. ಇದೀಗ ಆರೋಗ್ಯ ಸಚಿವ ಶ್ರೀರಾಮುಲು ‘ನನ್ನನ್ನು ಡಿಸಿಎಂ ಮಾಡಲೇಬೇಕು’ ಅಂತ ಗಡೇ ದೇವಿಗೆ ಪತ್ರ ಬರೆದಿದ್ದಾರೆ. ಈ ವಿಚಾರವೀಗ ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಯಾದಗಿರಿ ಜಿಲ್ಲೆಯ ಗಡೇ ದುರ್ಗಾದೇವಿಯ ದೇವಾಲಯಕ್ಕೆ ನಿನ್ನೆ ಭೇಟಿ ನೀಡಿದ ರಾಮುಲು ದೇವಿ ಮುಂದೆ ಡಿಸಿಎಂ ಹುದ್ದೆಯ ಬೇಡಿಕೆ ಇಟ್ಟಿದ್ದಾರೆ. ಮೂರು ಸಾಲಿನ ಪತ್ರದಲ್ಲಿ ಇಂಗ್ಲಿಷ್​ ಅಕ್ಷರಗಳಲ್ಲಿ ದೇವಿ ಬಳಿ ಬೇಡಿಕೊಂಡಿರುವ ರಾಮುಲು ‘Sriramulu Deputy Chief Minister of Karnataka Must Compulsory’ ಅಂತ ಬರೆದಿದ್ದಾರೆ. ಇದರಲ್ಲಿ ವ್ಯಾಕರಣ ತಪ್ಪಿದ್ದರೂ ‘ಶ್ರೀರಾಮುಲು ಆದ  ನನ್ನನ್ನ ಕರ್ನಾಟಕದ ಉಪ ಮುಖ್ಯಮಂತ್ರಿಯನ್ನಾಗಿ ಮಾಡಲೇಬೇಕು’ ಅಂತ ಕೇಳಿಕೊಂಡಿದ್ದಾರೆ. ಈ ಪತ್ರವನ್ನು ಬರೆದಿದ್ದು ತಾನೇ ಅಂತಾನೂ ಸಚಿವರು ಒಪ್ಪಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply