masthmagaa.com:
ರಾಜ್ಯ ಸಾರಿಗೆ ನೌಕರರ ಮುಷ್ಕರಕ್ಕೆ ಬೆಂಬಲ ನೀಡಿರುವ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಬಿಜೆಪಿ ಶಾಸಕ ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ. ‘ಕೋಡಿಹಳ್ಳಿ ಚಂದ್ರಶೇಖರ್ಗೂ ಸಾರಿಗೆ ನೌಕರರಿಗೆ ಏನು ಸಂಬಂಧ. ಎಲ್ಲಿ ಜನ ಸೇರುತ್ತಾರೋ ಅಲ್ಲಿ ಕೂತು ಬಿಟ್ಟಿ ಭಾಷಣ ಮಾಡುವ ವ್ಯಕ್ತಿಗೆ ಸಾರಿಗೆ ನೌಕರರು ತಮ್ಮ ವೇದಿಕೆಯಲ್ಲಿ ಅವಕಾಶ ನೀಡಬಾರದು. ದಲ್ಲಾಳಿಗಳ ಮುಖ್ಯಸ್ಥನಿಗೆ ಅವಕಾಶ ಕೊಡಬಾರದು. ಕೋಡಿಹಳ್ಳಿ ಚಂದ್ರಶೇಖರ್ ಒಬ್ಬ ನಾಲಾಯಕ್’ ಅಂತ ರೇಣುಕಾಚಾರ್ಯ ಹೇಳಿದ್ದಾರೆ. ಇದಕ್ಕೆ ತಿರುಗೇಟು ಕೊಟ್ಟಿರುವ ಕೋಡಿಹಳ್ಳಿ ಚಂದ್ರಶೇಖರ್, ‘ಯಾರು ಎಕ್ಸ್ ನರ್ಸ್ ರೇಣುಕಾಚಾರ್ಯನಾ. ಅಂತಹ 3ನೇ ದರ್ಜೆ ರಾಜಕಾರಣಿಯ ಹೇಳಿಕೆಗೆ ಏನೂ ಮಾಡಕ್ಕಾಗಲ್ಲ. ನಮಗೆ ಸಿಎಂ ಯಡಿಯೂರಪ್ಪ ಮೇಲೆ ವಿಶ್ವಾಸವಿದೆ. ಅವರು ಮಾತನಾಡಲಿ’ ಅಂತ ಹೇಳಿದ್ದಾರೆ. ಅಂದ್ಹಾಗೆ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನ ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷರನ್ನಾಗಿ ಸಾರಿಗೆ ನೌಕರರು ನಿನ್ನೆ ಆಯ್ಕೆ ಮಾಡಿದ್ದರು.
-masthmagaa.com
Contact Us for Advertisement