masthmagaa.com:
ದೆಹಲಿ: ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆ ಮುಂದುವರಿದಿದ್ದು, ಟಿಕ್ರಿ ಗಡಿಯಲ್ಲಿ ಓರ್ವ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 52 ವರ್ಷದ ಕರ್ಮವೀರ್ ಸಿಂಗ್, ಅಲ್ಲೇ ಹತ್ತಿರದ ಮರವೊಂದಕ್ಕೆ ಪ್ಲಾಸ್ಟಿಕ್ ಹಗ್ಗದಿಂದ ನೇಣು ಬಿಗಿದುಕೊಂಡು ಜೀವ ಬಿಟ್ಟಿದ್ದಾರೆ. ಇವರು ಹರ್ಯಾಣದ ಜಿಂದ್ ಮೂಲದವರು ಅಂತ ಅವರೊಂದಿಗಿದ್ದ ರೈತರು ಹೇಳಿದ್ದಾರೆ.
ಕರ್ಮವೀರ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡ ಜಾಗದಲ್ಲಿ ಪೊಲೀಸರಿಗೆ ಒಂದು ಡೆತ್ನೋಟ್ ಕೂಡ ಸಿಕ್ಕಿದೆ. ಅದರಲ್ಲಿ ಭಾರತೀಯ ಕಿಸಾನ್ ಯೂನಿಯನ್ಗೆ ಜಿಂದಾಬಾದ್. ಸರ್ಕಾರ ಒಂದರ ಮೇಲೊಂದರಂತೆ ದಿನಾಂಕಗಳನ್ನು ನೀಡುತ್ತಲೇ ಇದೆ. ಕೃಷಿಗೆ ಸಂಬಂಧಿಸಿದ ಕರಾಳ ಕಾನೂನನ್ನು ಯಾವಾಗ ವಾಪಸ್ ಪಡೆಯುತ್ತೋ ಗೊತ್ತಿಲ್ಲ ಅಂತ ಬರೆಯಲಾಗಿದೆ.
-masthmagaa.com
Contact Us for Advertisement