masthmagaa.com:
ಬಾಲಿವುಡ್ ನಟ ಸುಶಾಂತ್ ಸಿಂಗ್ ಪ್ರಕರಣ ಮತ್ತು ಡ್ರಗ್ ಮಾಫಿಯಾಗೆ ಸಂಬಂಧಿಸಿದಂತೆ ಕಂಗನಾ ರನಾವತ್ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಿನ ಸಂಘರ್ಷ ಜೋರಾಗಿದೆ. ಮುಂಬೈಗೆ ಬರದಂತೆ ಕಂಗನಾಗೆ ಬೆದರಿಕೆ ಹಾಕಿದ್ದು, ಬಳಿಕ ಕಂಗನಾಗೆ ಸೇರಿದ್ದ ಮುಂಬೈ ಕಚೇರಿಯ ಕೆಲವೊಂದು ಭಾಗವನ್ನು ನೆಲಸಮ ಮಾಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿವಸೇನೆ ಸಂಸದ ಮತ್ತು ವಕ್ತಾರ ಸಂಜಯ್ ರಾವತ್, ‘ಕಂಗನಾ ರನಾವತ್ ಅವರ ಕಚೇರಿಯನ್ನು ಕೆಡವಿದ್ದು ಪಾಲಿಕೆ ಅಧಿಕಾರಿಗಳು. ಇದಕ್ಕೂ ಶಿವಸೇನೆಗೂ ಯಾವುದೇ ಸಂಬಂಧವಿಲ್ಲ. ಈ ಬಗ್ಗೆ ಮುಂಬೈ ಮಹಾನಗರ ಪಾಲಿಕೆಯ ಮೇಯರ್ ಅಥವಾ ಆಯುಕ್ತರನ್ನು ಕೇಳಿ’ ಅಂತ ಹೇಳಿದ್ದಾರೆ.
ಅಂದ್ಹಾಗೆ ಕಂಗನಾ ಅವರ ಕಚೇರಿಯನ್ನು ಕೆಡವಲು ಬಾಂಬೆ ಹೈಕೋರ್ಟ್ ನಿನ್ನೆ ತಡೆ ನೀಡಿತ್ತು. ಸದ್ಯ ಪ್ರಕರಣವು ಕೋರ್ಟ್ನಲ್ಲಿ ಇರೋದ್ರಿಂದ ಬಿಎಂಸಿ ಅಧಿಕಾರಿಗಳು ಕಟ್ಟಡ ತೆರವು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.
-masthmagaa.com
Contact Us for Advertisement