ಕೊರೋನಾ 3ನೇ ಹಂತದಿಂದ ದೇಶವನ್ನು ರಕ್ಷಿಸಿದ್ದೇವೆ: ಕೇಂದ್ರ ಸಚಿವ

masthmagaa.com:

ದೆಹಲಿ: ದೇಶದಲ್ಲಿ ಲಾಕ್​ಡೌನ್ ಹೇರುವ ಮೂಲಕ ಕೊರೋನಾ ವೈರಸ್ 3ನೇ ಹಂತಕ್ಕೆ ಹೋಗದಂತೆ ತಡೆದಿದ್ದೇವೆ. ಈ ಮೂಲಕ ಇಡೀ ಭಾರತವನ್ನು ರಕ್ಷಿಸಿದ್ದೇವೆ ಅಂತ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ತಿಳಿಸಿದ್ದಾರೆ. ಈವರೆಗೆ ನಡೆಸಿರುವ ಪರೀಕ್ಷೆಗಳಲ್ಲಿ ಶೇ.4ರಷ್ಟು ಮಂದಿಯಲ್ಲಿ ಮಾತ್ರವೇ ಸೋಂಕು ದೃಢವಾಗಿದೆ. ಸ್ಟೇಜ್-3ಗೆ ಹೋದ್ರೆ ಏನು ಮಾಡೋದು ಅಂತ ನಾವೆಲ್ಲರೂ ಚಿಂತಿತರಾಗಿದ್ದೆವು. ಆದ್ರೆ ನಾವು ಕೊರೋನಾ 3ನೇ ಹಂತಕ್ಕೆ ತಲುಪುವುದನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಕೊರೋನಾ 3ನೇ ಹಂತದಿಂದ ದೇಶವನ್ನು ರಕ್ಷಿಸಿದ್ದೇವೆ ಅಂತ ಹೇಳಿದ್ದಾರೆ. ಸದ್ಯ ಹಾಟ್​ಸ್ಪಾಟ್​ಗಳಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗಿದ್ದು, ಇಂತಹ ಪ್ರದೇಶಗಳಲ್ಲಿ ಲಾಕ್​ಡೌನ್​​ನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply