masthmagaa.com:
ದೆಹಲಿ: ದೇಶದಲ್ಲಿ ಲಾಕ್ಡೌನ್ ಹೇರುವ ಮೂಲಕ ಕೊರೋನಾ ವೈರಸ್ 3ನೇ ಹಂತಕ್ಕೆ ಹೋಗದಂತೆ ತಡೆದಿದ್ದೇವೆ. ಈ ಮೂಲಕ ಇಡೀ ಭಾರತವನ್ನು ರಕ್ಷಿಸಿದ್ದೇವೆ ಅಂತ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ತಿಳಿಸಿದ್ದಾರೆ. ಈವರೆಗೆ ನಡೆಸಿರುವ ಪರೀಕ್ಷೆಗಳಲ್ಲಿ ಶೇ.4ರಷ್ಟು ಮಂದಿಯಲ್ಲಿ ಮಾತ್ರವೇ ಸೋಂಕು ದೃಢವಾಗಿದೆ. ಸ್ಟೇಜ್-3ಗೆ ಹೋದ್ರೆ ಏನು ಮಾಡೋದು ಅಂತ ನಾವೆಲ್ಲರೂ ಚಿಂತಿತರಾಗಿದ್ದೆವು. ಆದ್ರೆ ನಾವು ಕೊರೋನಾ 3ನೇ ಹಂತಕ್ಕೆ ತಲುಪುವುದನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಕೊರೋನಾ 3ನೇ ಹಂತದಿಂದ ದೇಶವನ್ನು ರಕ್ಷಿಸಿದ್ದೇವೆ ಅಂತ ಹೇಳಿದ್ದಾರೆ. ಸದ್ಯ ಹಾಟ್ಸ್ಪಾಟ್ಗಳಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗಿದ್ದು, ಇಂತಹ ಪ್ರದೇಶಗಳಲ್ಲಿ ಲಾಕ್ಡೌನ್ನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದ್ದಾರೆ.
-masthmagaa.com
Contact Us for Advertisement